ಕದ್ರಾ ಕೆಪಿಸಿ ಅತಿಥಿ ಗೃಹದಲ್ಲಿ ಗುರುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಕದ್ರಾ ಜಲಾಶಯದಲ್ಲಿ ಗುರುವಾರ1.80 ಲಕ್ಷ ಒಳಹರಿವು ಮತ್ತು 1.90 ಲಕ್ಷ ಹೊರಹರಿವು ದಾಖಲಾಗಿದೆ. ಅತ್ತ ಸೂಪಾ ಜಲಾಶಯದಿಂದ ಹೆಚ್ಚುವರಿಯಾಗಿ ನೀರನ್ನು ಹರಿಸಿದಾಗ ಕಾಳಿ ನದಿಯಲ್ಲಿ ನೀರಿನ ಮಟ್ಟ ಏರುತ್ತದೆ. ಹಾಗಾಗಿಮಲ್ಲಾಪುರ, ಕದ್ರಾ ಸೇರಿದಂತೆ ನದಿಪಾತ್ರದ 28 ಗ್ರಾಮಗಳ ಜನರನ್ನು ಶುಕ್ರವಾರದ ಒಳಗಾಗಿ ಸ್ಥಳಾಂತರಿಸಲಾಗುತ್ತದೆ. ಕಾರವಾರದ ಸಾಗರ ದರ್ಶನ ಸಭಾಂಗಣ ಮತ್ತು ಎ.ಸಿ. ಸಭಾಂಗಣದಲ್ಲಿ 1,000 ಜನರಿಗೆ ಆಶ್ರಯ ನೀಡಲಾಗುತ್ತದೆ’ ಎಂದು ತಿಳಿಸಿದರು.