ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ವಿದ್ಯುತ್ ಮಾರ್ಗ ನಿರ್ವಹಣೆಗೆ ಕೇವಲ ಒಬ್ಬ ಲೈನ್ಮೆನ್ ಇದ್ದು, ಹೆಚ್ಚುವರಿ ಇಬ್ಬರು ಲೈನ್ಮೆನ್ ಹಾಗೂ ಮೇಸ್ತ್ರಿಯನ್ನು ನೀಡಬೇಕು. ವಿದ್ಯುತ್ ಮಾರ್ಗಕ್ಕೆ ರ್ಯಾಬಿಟ್ ತಂತಿಗಳನ್ನು ಇನ್ಸುಲೇಟರ್ಗೊಂದಿಗೆ ಅಳವಡಿಸಬೇಕು. ಚಿನ್ನಾಪುರದಿಂದ ಮರಹಳ್ಳಿ ವರೆಗೆಗಿನ ಮಾರ್ಗದ ಮಧ್ಯೆ ತಂತಿಗೆ ತಗುಲಬಹುದಾದ ಮರದ ಟೊಂಗೆಗಳನ್ನು ಈ ಕೂಡಲೇ ಕತ್ತರಿಸಿ ಹಾಕಬೇಕು ಎಂದು ಸಂಘದ ಬಾರೆ– ಮಲಹಳ್ಳಿ ಘಟಕದ ಅಧ್ಯಕ್ಷ ವಿಘ್ನೇಶ್ವರ ಭಟ್ಟ ಹೊಸ್ತೋಟ ಒತ್ತಾಯಿಸಿದರು.