ಶಿರಸಿ: ಪುಟಾಣಿ ತುಳಸಿ ಹೆಗಡೆಯಿಂದ ‘ಪರಿವರ್ತನೆ ಜಗದ ನಿಯಮ’ ಯಕ್ಷರೂಪಕ, ನೈದಿಲೆ ಹೆಗಡೆ ಹೊರಾಲೆ ಗಾಯನ, ಕಲಾವಿದೆ ಹುಬ್ಬಳ್ಳಿಯ ಸುಜನಿ ಜಗನ್ನಾಥ ಎಂ.ಪಿ ಭರತನಾಟ್ಯ, ಶ್ವೇತಾ ಅರೆಹೊಳೆ ಅವರ ನಾಟ್ಯ ರೂಪಕ, ಸತೀಶ ಎಲೆಸರ ಅವರ ರಂಗಚಿತ್ರ, ವಾಗ್ಮಿ ಡಾ.ಗುರುರಾಜ ಕರಜಗಿ ಅವರ ವಿಶೇಷ ಉಪನ್ಯಾಸದೊಂದಿಗೆ ತಾಲ್ಲೂಕಿನ ಬೆಟ್ಟಕೊಪ್ಪದಲ್ಲಿ ‘ನಮ್ಮನೆ ಹಬ್ಬ’ ಗುರುವಾರ ಸಂಜೆ ನಡೆಯಿತು.