‘ಜಿಲ್ಲೆಗೆ ಮಾರಕವಾದ ಕಿಂಡಿ ಅಣೆಕಟ್ಟೆ, ಜಲವಿದ್ಯುತ್ ಯೋಜನೆಯಂಥ ಯೋಜನೆಗಳನ್ನು ತರಲು ಕೆಲವರು ಹಾತೊರೆಯುತ್ತಿದ್ದಾರೆ. ಆದರೆ, ಜಿಲ್ಲೆಗೆ ಕೊಡಬೇಕಾಗಿರುವ ರಸ್ತೆ, ನೀರು, ವಿದ್ಯುತ್ ಬಗ್ಗೆ ಅಷ್ಟಾಗಿ ಅವರಿಗೆ ಆಸಕ್ತಿ ಇದ್ದ ಹಾಗಿಲ್ಲ. ಹಾಗಾಗಿ, ಇನ್ನಾದರೂ ರಾಷ್ಟ್ರೀಯ ಹೆದ್ದಾರಿ ಮತ್ತು ಗ್ರಾಮೀಣ ರಸ್ತೆಗಳ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕು’ ಎಂದು ಅವರು ಆಗ್ರಹಿಸಿದ್ದಾರೆ.