ತೇರನ್ನು ರಥಬೀದಿಯಿಂದ ವೀರಭದ್ರ ದೇವಸ್ಥಾನದವರೆಗೂ ಎಳೆದು ಪುನಃ ಚನ್ನಬಸವೇಶ್ವರ ದೇವಸ್ಥಾನದ ಮುಂಭಾಗದವರೆಗೆ ತಂದು ನಿಲ್ಲಿಸಲಾಯಿತು.ಇದರೊಂದಿಗೆ ಮಹಾರಥೋತ್ಸವ ಸಂಪನ್ನವಾಯಿತು.
ರಥಬೀದಿಯ ಉದ್ದಗಲಕ್ಕೂ ಫಲಪುಷ್ಪ, ತೆಂಗಿನಕಾಯಿಗಳ ಅಂಗಡಿಗಳು, ವಿಭೂತಿ ಗಟ್ಟಿಗಳ, ಕುಂಕುಮ, ದೇವರ ಚಿತ್ರಗಳಿರುವ ಹಾರಗಳು, ಕಂಕಣಗಳು, ಫೋಟೊಗಳು, ಬೆತ್ತದ ಬುಟ್ಟಿಗಳು, ಮಕ್ಕಳ ಆಟಿಕೆಯ ಅಂಗಡಿಗಳು ಜಾತ್ರೆಯ ವಾತಾವರಣಕ್ಕೆ ಮೆರುಗು ನೀಡಿದ್ದವು.