ದಾಂಡೇಲಿ: ಇಲ್ಲಿಯ ಗಾಂಧಿನಗರದ ಆಶ್ರಯ ಕಾಲೊನಿಯಲ್ಲಿ ನಾಯಿಗಳು ದಾಳಿ ಮಾಡಿ ಗಾಯಗೊಳಿಸಿದ್ದಜಿಂಕೆಮರಿಯನ್ನು ಸಾರ್ವಜನಿಕರ ಸಹಾಯದೊಂದಿಗೆ ಅರಣ್ಯ ಇಲಾಖೆ ಸಿಬ್ಬಂದಿ ಶನಿವಾರ ರಕ್ಷಿಸಿದ್ದಾರೆ.
ಅರಣ್ಯ ಪ್ರದೇಶದಿಂದ ನಗರದಕ್ಕೆಬಂದಿದ್ದ ಜಿಂಕೆಯನ್ನು ಬೀದಿನಾಯಿಗಳುಕಚ್ಚಿ ಗಾಯಗೊಳಿಸಿದ್ದವು.ವಿಷಯ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿ ಜಿಂಕೆಯನ್ನು ರಕ್ಷಿಸಿ, ಪ್ರಥಮ ಚಿಕಿತ್ಸೆ ನೀಡಿ ಕಾಡಿಗೆ ಬಿಟ್ಟರು.
ಈ ಕಾರ್ಯಾಚರಣೆಯಲ್ಲಿ ದಾಂಡೇಲಿ ನಗರದ ಉಪ ವಲಯ ಅರಣ್ಯಾಧಿಕಾರಿ ಜಿ.ಸಂತೋಷ್, ಅನಿಲ್ ಆಚಾರಟ್ಟಿ, ಅರಣ್ಯ ವೀಕ್ಷಕರಾದ ರಫಿಕ್ ಕಿತ್ತೂರ್, ವೆಂಕಟೇಶ್ ಇದ್ದರು.