ಶಿರಸಿ: ನಗರದ ದೇವಿಕೆರೆಯಲ್ಲಿ ಬೆಳೆದಿದ್ದ ಗಿಡಗಂಟಿಗಳನ್ನು ಡಾಲ್ಫಿನ್ ಗ್ರುಪ್ನ ಸದಸ್ಯರು ಭಾನುವಾರ ಶ್ರಮದಾನದ ಮೂಲಕ ಸ್ವಚ್ಛಗೊಳಿಸಿದರು.
ಕೋಟೆಕೆರೆಯಲ್ಲಿ ಪ್ರತಿವಾರ ಈ ತಂಡ ಸ್ವಚ್ಛತಾ ಕಾರ್ಯ ನಡೆಸುತ್ತಿದೆ. ಈ ವಾರ ದೇವಿಕೆರೆ ಹಾಗೂ ಸುತ್ತಮುತ್ತ ಬೆಳೆದಿದ್ದ ನಿರುಪಯುಕ್ತ ಗಿಡಗಳು, ಕಸಕಡ್ಡಿಗಳನ್ನು ಸ್ವಚ್ಛಗೊಳಿಸಿದರು. ಸುಮಾರು ಎರಡು ತಾಸುಗಳ ಕಾಲ ಶ್ರಮದಾನ ನಡೆಸಿದರು.
‘ನಗರದ ಮಧ್ಯದಲ್ಲಿ ಇರುವ ದೇವಿಕೆರೆ ಮಲೀನವಾಗಿರುವುದನ್ನು ಕಂಡು ಬೇಸರವಾಯಿತು. ಕೋಟೆಕೆರೆಯಂತೆ ಈ ಕೆರೆಯನ್ನೂ ಸ್ವಚ್ಛಗೊಳಿಸುವ ಕುರಿತು ಸ್ನೇಹಿತರು ಚರ್ಚಿಸಿದೆವು. ಭಾನುವಾರ ಬಿಡುವು ಮಾಡಿಕೊಂಡು ಸ್ವಚ್ಛತೆ ನಡೆಸಲಾಯಿತು. ಸ್ವಲ್ಪ ದಿನ ಬಿಟ್ಟು ಮತ್ತೆ ಶ್ರಮದಾನ ನಡೆಸಿ, ದೇವಿಕೆರೆ ಸುತ್ತ ಸ್ವಚ್ಛತೆ ಕಾಯ್ದುಕೊಳ್ಳಲು ಪ್ರಯತ್ನಿಸುತ್ತೇವೆ’ ಎಂದು ಡಾಲ್ಫಿನ್ ಗ್ರುಪ್ನ ಸದಸ್ಯರಲ್ಲೊಬ್ಬರಾದ ವಿಠ್ಠಲ ಪಂಡಿತ ತಿಳಿಸಿದರು.