‘ಇಂದು ಪತ್ರಿಕೋದ್ಯಮಕ್ಕೆ ಆದರ್ಶ ಎಂದು ಯಾರನ್ನಾದರೂ ತೋರಿಸಬಹುದೇ? ಯಾವ ಸಂಪಾದಕ, ನಿರೂಪಕನನ್ನು ವಿಶ್ವಾಸಾರ್ಹ ಎಂದು ಹೇಳಬಹುದು? ಯಾವುದಾದರೂ ಲೇಖನ, ವರದಿ, ಅಂಕಣ ಹೊಸ ಆಲೋಚನೆಗಳನ್ನು ಬಿತ್ತುತ್ತಿದೆಯೇ? ಕನ್ನಡದ ಅತಿದೊಡ್ಡ ತನಿಖಾ ವರದಿಗಾರನನ್ನಾಗಿ ಯಾರನ್ನು ತೋರಿಸಬಹುದು? ಭಾಷೆಯ ಕೌಶಲವನ್ನು ಯಾವ ಅಂಕಣದಲ್ಲಿ ಕಾಣಬಹುದು ಇತ್ಯಾದಿ ಪ್ರಶ್ನೆಗಳನ್ನು ಪತ್ರಿಕೆಗಳ ಓದುಗರು ಮತ್ತು ಟಿವಿ ನೋಡುಗರು ಕೇಳಿಕೊಳ್ಳಬೇಕಾಗಿದೆ’ ಎಂದರು.