ಅಭಿನಂದನೆ ಸ್ವೀಕರಿಸಿದ ವೆಂಕಟೇಶ ನಾಯಕ, ‘ಕಾರ್ಯಕರ್ತರು ಪಕ್ಷದ ಜನಪ್ರತಿನಿಧಿಗಳಲ್ಲಿ ಪ್ರಧಾನಿ ಮೋದಿ ಅವರ ಕಾರ್ಯವೈಖರಿಯನ್ನು ಹಾಗೂ ನಾಯಕರಲ್ಲಿ ಅಮಿತ್ ಶಾ ಅವರ ಸಂಘಟನಾ ಚತುರತೆಯನ್ನು ಹುಡುಕುತ್ತಿದ್ದಾರೆ’ ಎಂದರು. ಶಾಸಕರಾದ ಸುನೀಲ ನಾಯ್ಕ, ರೂಪಾಲಿ ನಾಯ್ಕ, ವಿಧಾನ ಪರಿಷತ್ ಎಸ್.ವಿ. ಸಂಕನೂರ, ಮಾಜಿ ಸಚಿವ ಶಿವಾನಂದ ನಾಯ್ಕ, ಮಾತನಾಡಿದರು. ವಿನೋದ ಪ್ರಭು, ಪ್ರಮೋದ ಹೆಗಡೆ, ಎಂ.ಜಿ. ನಾಯ್ಕ, ಮಾಜಿ ಶಾಸಕರಾದ ವಿವೇಕಾನಂದ ವೈದ್ಯ, ಸುನೀಲ ಹೆಗಡೆ, ಎಂ.ಪಿ. ಕರ್ಕಿ, ಗಂಗಾಧರ ಭಟ್ಟ ಇದ್ದರು. ಕೆ.ಜಿ. ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು.