ಮೀನು ಚೆನ್ನಾಗಿ ಬೆಳೆಯಲು ಅಗತ್ಯವಿರುವ ಜೇಡಿಮಣ್ಣು, ಸೆಗಣಿ ಗೊಬ್ಬರವನ್ನು ಹಾಕಿ ನೀರನ್ನು ಹದಗೊಳಿಸಲಾಗಿದೆ. ಇದರಲ್ಲಿ ಮೀನುಮರಿ ಬಿಡುವ ಕಾರ್ಯ ನಡೆದಿದೆ. ಇವನ್ನು ಭದ್ರಾ ಅಣೆಕಟ್ಟು ಮೀನುಮರಿ ಉತ್ಪಾದನಾ ಕೇಂದ್ರದಿಂದ ತರಲಾಗಿದೆ. ಮುಂದಿನ 35–40 ದಿನಗಳ ಕಾಲ ಈ ಮರಿಗಳನ್ನು ಆರೈಕೆ ಮಾಡಲಾಗುತ್ತದೆ. ನಂತರ ಶೇ 30ರಷ್ಟು ಮರಿಗಳನ್ನು ಇಲಾಖೆ ಉಳಿಸಿಕೊಂಡು, ಉಳಿದವನ್ನು ಮೀನು ಕೃಷಿ ಮಾಡುವ ರೈತರಿಗೆ ವಿತರಿಸುತ್ತದೆ.