‘ಕೋವಿಡ್ ಕಾರಣಕ್ಕೆ ಮೇಳ ಆಯೋಜಿಸದಿರಲು ನಿರ್ಧರಿಸಲಾಗಿದೆ. ಫೆಬ್ರವರಿ ಹೊತ್ತಿಗೆ ಮೇಳ ಆಯೋಜನೆಗೊಳ್ಳಬೇಕೆಂದರೆ ಅಕ್ಟೋಬರ್ ಹೊತ್ತಿಗೆ ತಯಾರಿ ಆರಂಭಿಸಬೇಕಿತ್ತು. ಹೂವು, ತರಕಾರಿ ಗಿಡಗಳನ್ನು ಆಗಲೇ ನೆಟ್ಟು, ಬೆಳೆಸುವ ಕೆಲಸ ನಡೆಯುತ್ತಿತ್ತು. ಕೋವಿಡ್ ಹಾವಳಿಯ ಪರಿಸ್ಥಿತಿ ಗಮನಿಸಿ ನಿರ್ಣಯಿಸಬೇಕಿದ್ದರಿಂದ ಮೇಳ ಕೈಬಿಟ್ಟಿದ್ದೇವೆ’ ಎಂದು ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಬಿ.ಪಿ.ಸತೀಶ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.