ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲ್ವರು ಹೆಸ್ಕಾಂ ನೌಕರರ ಅಮಾನತು

Last Updated 8 ಮಾರ್ಚ್ 2022, 16:04 IST
ಅಕ್ಷರ ಗಾತ್ರ

ಶಿರಸಿ: ಹೆಸ್ಕಾಂಗೆ ಸೇರಿದ್ದ ಹಳೆಯ ಪರಿಕರಗಳನ್ನು ನಿಯಮಕ್ಕೆ ವಿರುದ್ಧವಾಗಿ ಸಾಗಿಸಲು ಅವಕಾಶ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಹೆಸ್ಕಾಂ ಉಪವಿಭಾಗದ ನಾಲ್ವರನ್ನು ಅಮಾನತು ಮಾಡಲಾಗಿದೆ.

ಶಿರಸಿ ಕಾರ್ಯಪಾಲನಾ ವಿಭಾಗದ ಸಹಾಯಕ ಎಂಜಿನಿಯರ್ ಎಸ್.ಗಿರೀಶ್, ಉಗ್ರಾಣ ಪಾಲಕ ಅಂಟೋನಿ ಕೆ., ಸಹಾಯಕ ಉಗ್ರಾಣ ಪಾಲಕ ಮಹಾದೇವಪ್ಪ ಎಲ್.ನಾಯಕ ಮತ್ತು ಉಗ್ರಾಣ ಕಾವಲುಗಾರ ಅಂಟೋನಿ ಸೆಬೆಸ್ಟಿನ್ ಸೇಲ್ವಕುಮಾರ ಅಮಾನತ್‍ಗೊಂಡವರು. ಈ ನಾಲ್ವರ ಮೇಲೆ ಇಲಾಖಾ ವಿಚಾರಣೆ ನಡೆಸಬೇಕು ಎಂದು ಹೆಸ್ಕಾಂ ಪ್ರಧಾನ ವ್ಯವಸ್ಥಾಪಕರು ಆದೇಶಿಸಿದ್ದಾರೆ.

ಲಕ್ಷಾಂತರ ಮೌಲ್ಯದ ಹಳೆಯ ಪರಿಕರಗಳನ್ನು ಪರವಾನಿಗೆ ಇಲ್ಲದೆ ಸಾಗಿಸಲು ಅವಕಾಶ ನೀಡಿದ್ದಕ್ಕಾಗಿ ಹೆಸ್ಕಾಂ ಜಾಗೃತ ದಳ ಐದು ದಿನದ ಹಿಂದೆ ಪ್ರಕರಣ ದಾಖಲಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT