ಶಿರಸಿ ಕಾರ್ಯಪಾಲನಾ ವಿಭಾಗದ ಸಹಾಯಕ ಎಂಜಿನಿಯರ್ ಎಸ್.ಗಿರೀಶ್, ಉಗ್ರಾಣ ಪಾಲಕ ಅಂಟೋನಿ ಕೆ., ಸಹಾಯಕ ಉಗ್ರಾಣ ಪಾಲಕ ಮಹಾದೇವಪ್ಪ ಎಲ್.ನಾಯಕ ಮತ್ತು ಉಗ್ರಾಣ ಕಾವಲುಗಾರ ಅಂಟೋನಿ ಸೆಬೆಸ್ಟಿನ್ ಸೇಲ್ವಕುಮಾರ ಅಮಾನತ್ಗೊಂಡವರು. ಈ ನಾಲ್ವರ ಮೇಲೆ ಇಲಾಖಾ ವಿಚಾರಣೆ ನಡೆಸಬೇಕು ಎಂದು ಹೆಸ್ಕಾಂ ಪ್ರಧಾನ ವ್ಯವಸ್ಥಾಪಕರು ಆದೇಶಿಸಿದ್ದಾರೆ.