ಕಾತೂರ ಭಾಗದಿಂದ ಆನೆಗಳ ಹಿಂಡು ಬಂದಿದ್ದು ಬೆಣಗಿ ಗ್ರಾಮದ ಮುಖಾಂತರ ಬಿಸಲಕೊಪ್ಪ ಪ್ರವೇಶಿಸಿವೆ. ಒಂದು ಗಂಡು, ಎರಡು ಹೆಣ್ಣು ಆನೆಗಳ ಜತೆಗೆ ಮರಿ ಆನೆಯೂ ಇದೆ. ರಸ್ತೆ, ಕಾಡಿನ ಮಾರ್ಗವಾಗಿ ಬಂದಿರುವ ಆನೆಗಳು ಬಿಸಲಕೊಪ್ಪ ಗ್ರಾಮದ ವಿನಾಯಕ ಭಟ್ಟ ಎಂಬುವವರ ಅಡಿಕೆ ತೋಟಕ್ಕೆ ನುಗ್ಗಿ ದಾಂಧಲೆ ಎಬ್ಬಿಸಿವೆ. ಮಳಲಗಾಂವ ಭಾಗದಲ್ಲಿ ಹಲವು ರೈತರ ಕೃಷಿಭೂಮಿಗೆ ಹಾನಿ ಉಂಟುಮಾಡಿದೆ.