ಶಿರಸಿ: ಸತತ ಮಳೆಯಿಂದ ಕುಸಿದಿದ್ದ ತಾಲ್ಲೂಕಿನ ಹಲಗದ್ದೆ ಗ್ರಾಮ ಪಂಚಾಯ್ತಿಯ ಎರಡು ಕುಟುಂಬಗಳಿಗೆ ಗ್ರಾಮ ಪಂಚಾಯ್ತಿ ಸದಸ್ಯ ಅರವಿಂದ ತೇಲಗುಂದ ಸ್ವಂತ ಖರ್ಚಿನಿಂದ ತಲಾ ₹ 5 ಸಾವಿರ ಪರಿಹಾರ ನೀಡಿದರು.
ಹಲಗದ್ದೆಯ ಗುತ್ಯಮ್ಮ ಚಲವಾದಿ, ವಡ್ಡಿನಕೊಪ್ಪದ ಸುಶೀಲಾ ಪೂಜಾರಿ ಎಂಬುವವರ ಮನೆ ಕುಸಿದಿತ್ತು. ಸ್ಥಳಕ್ಕೆ ಭೇಟಿ ನೀಡಿದ ಅರವಿಂದ ತುರ್ತು ಸಹಾಯಕ್ಕೆ ಸ್ವಂತ ಖರ್ಚಿನಲ್ಲಿ ಪರಿಹಾರ ಒದಗಿಸಿದರು. ಸದಸ್ಯರಾದ ರೇಣುಕಾ ತಳವಾರ, ಗ್ರಾಮ ಪಂಚಾಯ್ತಿ ಕಾರ್ಯದರ್ಶಿ ಐ.ಜಿ.ಚೆನ್ನಯ್ಯ ಇದ್ದರು.