ನಗರದಲ್ಲಿ ಬಿದ್ದ ಮಳೆ ನೀರನ್ನು ಸಮುದ್ರಕ್ಕೆ ಸೇರಿಸುವ ಸುಮಾರು 10 ಕಿಲೋಮೀಟರ್ ಉದ್ದದ ಈ ಕಾಲುವೆಯಲ್ಲಿ ವಿವಿಧ ಜಾತಿಯ ಮೀನು, ಹಾವು, ಕಪ್ಪೆಗಳು ವಾಸವಾಗಿವೆ. ಮಂಗಳವಾರ ಬೆಳಿಗ್ಗೆ 11ರ ಸುಮಾರಿಗೆ ಮೀನುಗಳು ಮತ್ತು ಹಾವುಗಳ ಕಳೇಬರ ನೀರಿನಲ್ಲಿ ತೇಲುತ್ತ ಸಾಗುತ್ತಿದ್ದುದು ಕಂಡುಬಂತು. ಇದನ್ನು ಗಮನಿಸಿದ ಸಾರ್ವಜನಿಕರು ಕಿಡಿಗೇಡಿಗಳು ವಿಷ ಹಾಕಿರುವ ಅಥವಾ ರಾಸಾಯನಿಕ ತ್ಯಾಜ್ಯವನ್ನು ಗಟಾರಕ್ಕೆ ಬಿಟ್ಟಿರುವ ಅನುಮಾನ ವ್ಯಕ್ತಪಡಿಸಿದ್ದಾರೆ.