ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಾರವಾರದ ಕೋಣೆನಾಲಾ ಸ್ವಚ್ಛಗೊಳಿಸಿ ಸೇತುವೆ ನಿರ್ಮಾಣ ಮಾಡಲಾಗುವುದು.ಕಾರವಾರ– ಅಂಕೋಲಾ ತಾಲ್ಲೂಕುಗಳ ಮಹಿಳೆಯರ ಸಮಸ್ಯೆಗಳನ್ನು ಉಚಿತವಾಗಿ ಬಗೆಹರಿಸಲು ಸಭಾಭವನ ಕಟ್ಟಡ ನಿರ್ಮಿಸಲಾಗುವುದು. ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣಗಳಲ್ಲಿರುವ ಶೌಚಾಲಯ ಬಳಕೆಗೆ ಶುಲ್ಕ ರದ್ದು ಮಾಡಲಾಗುವುದು’ ಎಂದು ಭರವಸೆ ನೀಡಿದರು.