ಲಭ್ಯವಿರುವ ಶಾಸನ, ಪತ್ರ ವ್ಯವಹಾರದ ದಾಖಲೆಯನ್ನು ಆಧರಿಸಿ ಕೆಲ ಇತಿಹಾಸಕಾರರು ಟಿಪ್ಪು ಸುಲ್ತಾನನನ್ನು ಅಪ್ರತಿಮ ದೇಶಭಕ್ತ ಎಂದು, ಇನ್ನೂ ಕೆಲವರು ಮತಾಂಧ ಎಂದೂ ಉಲ್ಲೇಖಿಸುತ್ತಾರೆ. ಹಾಗಾಗಿ ಇತಿಹಾಸ ವಸ್ತುನಿಷ್ಠೆ ಎಂಬ ಕಲ್ಪನೆ ಬಿಡಬೇಕು. ಚರಿತ್ರೆಕಾರರು ಇತಿಹಾಸವನ್ನು ಪುನರ್ ನಿರ್ಮಾಣ ಮಾಡಲಾರರು, ಬದಲಾಗಿ ಆಕರಗಳ ಮೂಲಕ ಗತಕಾಲದ ಬಗ್ಗೆ ಜ್ಞಾನ ನಿರ್ಮಾಣ ಮಾಡಬಲ್ಲರು. ಸಾರ್ವಜನಿಕ ಬದುಕಿನಲ್ಲಿ ಕೆಲ ಆದರ್ಶಗಳು, ಪ್ರತಿಮೆಗಳು ಕಾಲಾಂತರದಲ್ಲಿ ಭ್ರಷ್ಟವಾಗುತ್ತವೆ. ಪ್ರಜಾಪ್ರಭುತ್ವದಲ್ಲಿ ಯೋಚನೆ ಮಾಡುವ ಕಾರ್ಯ ಪವಿತ್ರವಾಗಿದ್ದು, ಅಲ್ಲಿ ಸೈನಿಕ ಮಾದರಿ ಹೇರಿ ಆಜ್ಞಾಧಾರಕನಾಗು ಎಂದರೆ ಭ್ರಷ್ಟಗೊಳಿಸಿದಂತೆ ಎಂದು ಅಭಿಪ್ರಾಯಪಟ್ಟರು.