ಆ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಮಾರ್ಗರೆಟ್ ಆಳ್ವ ಸ್ಪರ್ಧಿಸಿದ್ದರು.ನಗರದ ಮಿತ್ರ ಸಮಾಜ ಮೈದಾನದಲ್ಲಿ ಏರ್ಪಡಿಸಲಾಗಿದ್ದ ಪ್ರಚಾರ ಕಾರ್ಯಕ್ರಮದಲ್ಲಿ ಅವರು ಭಾಷಣ ಮಾಡಿದ್ದರು. ಇಲ್ಲಿನ ಕಡಲತೀರ, ಅಚ್ಚ ಹಸಿರಿನ ಬೆಟ್ಟಗಳ ನಡುವೆ ಇರುವ ನಗರದ ಸೌಂದರ್ಯಕ್ಕೆ ಅವರು ಮಾರುಹೋಗಿದ್ದರು. ಕೆಲವು ತಾಸು ಇಲ್ಲಿದ್ದು ಅವರು ಶಿರಸಿ, ಕುಮಟಾ, ಹೊನ್ನಾವರಕ್ಕೆ ತೆರಳಿದ್ದರು. ಬಳಿಕ ಹೆಲಿಕಾಪ್ಟರ್ನಲ್ಲಿ ಬೆಳಗಾವಿಗೆ ಪ್ರಯಾಣಿಸಿದ್ದರು ಎಂದು ಪಕ್ಷದ ಜಿಲ್ಲಾ ಘಟಕದ ವಕ್ತಾರ ರಾಜೇಶ್ ನಾಯ್ಕಸ್ಮರಿಸಿದರು.