ಪ್ರಯಾಣಿಕರಿಂದ ಬೇಡಿಕೆಯಿದ್ದರೂ ರೈಲಿನ ಸಂಚಾರವನ್ನು ಮಂಗಳೂರುವರೆಗೆ ಸೀಮಿತಗೊಳಿಸಿದ್ದ ನೈಋತ್ಯ ರೈಲ್ವೆಯ ಕ್ರಮಕ್ಕೆ ಸಾರ್ವಜನಿಕರು, ಜನಪ್ರತಿನಿಧಿಗಳಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಅಲ್ಲದೇ ಕಾರವಾರದಿಂದ ಪ್ರಯಾಣಿಸುವ ರೈಲಿಗೆ ವಿಸ್ಟಾಡೋಮ್ ಬೋಗಿ ಅಳವಡಿಸುವಂತೆಯೂ ಬೇಡಿಕೆ ವ್ಯಕ್ತವಾಗಿತ್ತು. ಇದಕ್ಕೆ ಸ್ಪಂದನೆ ಸಿಕ್ಕಿರುವ ಕಾರಣ, ಪ್ರವಾಸಿಗರಿಗೆ ರೈಲಿನಲ್ಲಿ ಸಂಚರಿಸುತ್ತಲೇ ಕಾಡು, ಸಮುದ್ರ, ನದಿಗಳ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಅವಕಾಶ ಒದಗಿದೆ.