ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಿ.ಕೃಷ್ಣಪ್ಪ ಅವರ ನಿಧನದ ನಂತರ ಸಮಿತಿಯು ವಿಘಟನೆಯತ್ತ ಮುಖ ಮಾಡಿತ್ತು. ಸೈದ್ಧಾಂತಿಕ ಭಿನ್ನಾಭಿಪ್ರಾಯದಿಂದ ಹೊರ ಬಂದಿದ್ದ ಕೆಲವರು, ಸಮಿತಿಯ ಹೆಸರು ಮತ್ತು ನೋಂದಣಿ ಸಂಖ್ಯೆಯನ್ನು ಬಳಸುತ್ತಿದ್ದರು. 1974ರಿಂದ 2009ರವರೆಗೂ ದಾಖಲೆಗಳಿದ್ದು, ಕಾಲಕಾಲಕ್ಕೆ ಸಮಿತಿಯನ್ನು ನವೀಕರಣ ಮಾಡಲಾಗುತ್ತಿತ್ತು. ಆದರೂ ಹಲವರು ಸಮಿತಿಯ ಹೆಸರಿನಲ್ಲೇ ಚಟುವಟಿಕೆ ನಡೆಸುತ್ತಿದ್ದರು. ಇದರ ವಿರುದ್ಧ ಭದ್ರಾವತಿ ಜೆ.ಎಂ.ಎಫ್.ಸಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗಿತ್ತು’ ಎಂದರು.