ಸದಸ್ಯ ನರಸಿಂಹ ಹೆಗಡೆ ಮಾತನಾಡಿ, ‘ಆಸ್ಪತ್ರೆಯ ನೂತನ ಕಟ್ಟಡ ನಿರ್ಮಾಣವಾಗಿದೆ. ಆದರೆ, ಹಸ್ತಾಂತರವಾಗದ ಕಾರಣ ಉದ್ಘಾಟನೆಯಾಗಿಲ್ಲ. ಆದರೆ, ವೈದ್ಯರ ತರಾತುರಿ ನಿರ್ಣಯದಿಂದ ಉದ್ಘಾಟನೆಗೆ ಮುನ್ನವೇ ಹೊಸ ಕಟ್ಟಡ ಬಳಕೆಯಾಗುತ್ತಿದೆ. ಸರ್ಕಾರದ ನಿಯಮಕ್ಕೆ ಬೆಲೆಯಿಲ್ಲದಂತೆ, ವರ್ತಿಸುತ್ತಿರುವ ವೈದ್ಯರು ಇಲ್ಲಿರುವ ಅಗತ್ಯವಿಲ್ಲ’ ಎಂದರು.