ಸೋಮವಾರ ಮೊಬೈಲ್ ನೆಟ್ವರ್ಕ್ ಸಿಕ್ಕಿದ ಕೂಡಲೇ ಕರೆ ಮಾಡಿದ ಅವರು, ‘ಮನೆಯ ಹತ್ತಿರದ ಹಳ್ಳವು ಜೋರಾಗಿ ಸುರಿದ ಮಳೆಯಿಂದ ಉಕ್ಕಿ ಹರಿದು ತೋಟವಿಡೀ ಜಲಾವೃತವಾಯಿತು.ಅಷ್ಟರಲ್ಲಿತೋಟದ ಮೇಲ್ಭಾಗದಲ್ಲಿದ್ದ ಗುಡ್ಡದ ಮಣ್ಣು, ಅದರಲ್ಲಿದ್ದ ಕಾಡು ಜಾತಿಯಬೃಹತ್ ಮರಗಳು ತೋಟದ ಮೇಲೆ ಎರಗಿದವು. ಅವುಗಳ ಹೊಡೆತಕ್ಕೆಸುಮಾರು ಒಂದು ಎಕರೆಯಷ್ಟು ತೋಟಕ್ಕೆ ಹಾನಿಯಾಗಿದೆ’ ಎಂದು ಅಳಲು ತೋಡಿಕೊಂಡರು.