ಮುಂಡಗೋಡ– ಯಲ್ಲಾಪುರ ತಾಲ್ಲೂಕುಗಳ ಕೊಂಡಿಯಾಗಿರುವ ಶಿಡ್ಲಗುಂಡಿ ಸೇತುವೆಯ ಸಂಪರ್ಕ ರಸ್ತೆ ಇತ್ತೀಚಿನ ಬೇಡ್ತಿ ಪ್ರವಾಹಕ್ಕೆ ಕೊಚ್ಚಿಕೊಂಡು ಹೋಗಿತ್ತು. ಸಂಪರ್ಕ ಕಡಿತದಿಂದ ಯಲ್ಲಾಪುರಕ್ಕೆ ನಿತ್ಯ ಸಂಚರಿಸುವ ತಾಲ್ಲೂಕಿನ ಮೈನಳ್ಳಿ, ಶಿಡ್ಲಗುಂಡಿ, ಗುಂಜಾವತಿ ಭಾಗದ ನೂರಾರು ವಿದ್ಯಾರ್ಥಿಗಳು, ಕೂಲಿ ಕೆಲಸಕ್ಕೆ ಹೋಗುವರು, ಗಡಿಭಾಗದ ಗ್ರಾಮಗಳಲ್ಲಿ ಸರ್ಕಾರಿ, ಅರೆ ಸರ್ಕಾರಿ ಕೆಲಸ ಮಾಡುವರು..ಹೀಗೆ ನೂರಾರು ಜನರು ತೊಂದರೆ ಅನುಭವಿಸುತ್ತಿದ್ದಾರೆ.