ಶಿರಸಿ: ಲಾಕ್ಡೌನ್ ಆದೇಶದ ನಡುವೆಯೇ ತಾಲ್ಲೂಕಿನ ಜಾನ್ಮನೆ ಗ್ರಾಮ ಪಂಚಾಯ್ತಿಯ ಪಿಡಿಒ, ಸೋಮವಾರ ಕಾರ್ಮಿಕರಿಂದ ಕಾಮಗಾರಿ ಮಾಡಿಸಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ. ಪಿಡಿಒ ಕೃಷ್ಣಪ್ಪ ಅವರು, ಸ್ಥಳೀಯ ಕಾಂಕ್ರೀಟ್ ರಸ್ತೆಯೊಂದರ ಕಾಮಗಾರಿ ಮಾಡಿಸಿದ್ದಾರೆ. ಈ ಸಂದರ್ಭದಲ್ಲಿ ಸಾಮಾಜಿಕ ಅಂತರದ ನಿಯಮವೂ ಪಾಲನೆಯಾಗಿಲ್ಲ, ಕಾರ್ಮಿಕರು ಮಾಸ್ಕ್ ಧರಿಸಿರಲಿಲ್ಲ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.