‘ಕೆಎಂಸಿ ಆಸ್ಪತ್ರೆಯಲ್ಲಿ ಆರು ದಿನ ಅಲ್ಲಿನ ವೈದ್ಯರಾದ ಡಾ. ನರಸಿಂಹ ಪೈ, ಡಾ. ಪದ್ಮನಾಭ ಕಾಮತ್, ಡಾ. ರಾಕೇಶ್ ಒಳಗೊಂಡ ತಂಡದವರು ಸುಕ್ರಜ್ಜಿ ಆರೋಗ್ಯದ ಬಗ್ಗೆ ತುಂಬಾ ಕಾಳಜಿವಹಿಸಿದ್ದರು. ಅಜ್ಜಿ ಈಗ ಹಿಂದಿನ ಉತ್ಸಾಹ, ಲವಲವಿಕೆಗೆ ಮರಳಿದ್ದಾರೆ. ಮೂಲತ್ವ ಫೌಂಡೇಶನ್ನ ಪ್ರಕಾಶ್ ಕೋಟ್ಯಾನ್, ಕಲ್ಪನಾ ಕೋಟ್ಯಾನ್ ಅವರು ತಮ್ಮದೇ ಕಾರಿನಲ್ಲಿ ಸುಕ್ರಜ್ಜಿಯನ್ನು ಅಂಕೋಲಾಕ್ಕೆ ಕರೆದುಕೊಂಡು ಹೋಗಿ, ಸಹಕರಿಸಿದರು’ ಎಂದು ಸುಕ್ರಜ್ಜಿ ಚಿಕಿತ್ಸೆಗೆ ಬಗ್ಗೆ ವಿಶೇಷ ನಿಗಾವಹಿಸುತ್ತಿದ್ದ ಇಲ್ಲಿನ ಸಾಮಾಜಿಕ ಕಾರ್ಯಕರ್ತ ದಿನೇಶ್ ಹೊಳ್ಳ ತಿಳಿಸಿದ್ದಾರೆ.