<p><strong>ಶಿರಸಿ:</strong> ಬಹುವಿಧದ ಅಂಗವೈಕಲ್ಯ ಹೊಂದಿದ್ದ ಸ್ನೇಹಿತೆಯನ್ನು ನಿತ್ಯ ಶಾಲೆಗೆ ಕರೆದುಕೊಂಡು ಬಂದು ಕಾಯಕನಿಷ್ಠೆ ತೋರಿದ್ದ ಬಾಲಕನಿಗೆ ಹಿರಿಯ ಅಧಿಕಾರಿಯೊಬ್ಬರು ಬೆನ್ನುತಟ್ಟಿದ್ದಾರೆ.</p>.<p>ತಾಲ್ಲೂಕಿನ ತಿಗಣಿ ಹಿರಿಯ ಪ್ರಾಥಮಿಕ ಶಾಲೆಯ ಆರನೇ ತರಗತಿ ವಿದ್ಯಾರ್ಥಿ ನಿರಂಜನ ಕಬ್ಬೇರ್ ನಿತ್ಯ ಶಾಲೆಗೆ ಬರುವಾಗ, ಬೆನ್ನುಹುರಿ, ಕಾಲಿನ ತೊಂದರೆ ಅನುಭವಿಸುತ್ತಿದ್ದ ಸ್ನೇಹಿತೆ ಪ್ರಾರ್ಥನಾ ಗೌಡಳ ಸ್ಕೂಲ್ ಬ್ಯಾಗ್ ಹೊತ್ತುಕೊಂಡು ಅವಳನ್ನು ನಡೆಸಿಕೊಂಡು ಶಾಲೆಗೆ ಕರೆತರುತ್ತಿದ್ದ. ಆಕೆ ಮೂರನೇ ತರಗತಿಯಲ್ಲಿರುವಾಗಿನಿಂದ ಈ ಕಾಯಕವನ್ನು ನಿತ್ಯವೂ ವ್ರತದಂತೆ ಪಾಲಿಸುತ್ತಿದ್ದ ಆತ, ಒಂದು ವರ್ಷದ ಹಿಂದೆ ಪ್ರಾರ್ಥನಾ ಅಸುನೀಗುವವರೆಗೂ ಇದನ್ನು ಮುಂದುವರಿಸಿದ್ದ.</p>.<p>’ಪ್ರಜಾವಾಣಿ’ ಕಳೆದ ನವೆಂಬರ್ 14, ಮಕ್ಕಳ ದಿನಾಚರಣೆಯಂದು ‘ಬಣ್ಣದ ಚಿಟ್ಟೆ’ ಶೀರ್ಷಿಕೆಯಡಿ, ಪರಿಚಯಿಸಿದ ಸಾಧಕ ಮಕ್ಕಳಲ್ಲಿ ನಿರಂಜನ ಕೂಡ ಒಬ್ಬನಾಗಿದ್ದ. ಈ ವರದಿ ಓದಿದ್ದ ಸಮಗ್ರ ಶಿಕ್ಷಣ ಕರ್ನಾಟಕದ ಕಾರ್ಯಕ್ರಮ ನಿರ್ದೇಶಕ ಕೆ.ರಾಜು ಮೊಗವೀರ ಅವರು, ವಿದ್ಯಾರ್ಥಿಯಲ್ಲಿರುವ ಮಾನವೀಯ ಮೌಲ್ಯವನ್ನು ಗುರುತಿಸಿ, ಆತನಿಗೆ ಪ್ರಶಂಸಾ ಪತ್ರ ಹಾಗೂ ₹ 3000 ಮೊತ್ತದಠೇವಣಿಪತ್ರವನ್ನು ಕಳುಹಿಸಿಕೊಟ್ಟಿದ್ದರು.</p>.<p>ಭಾನುವಾರ ತಿಗಣಿ ಶಾಲೆಯಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಬನವಾಸಿಯ ಹಿರಿಯರಾದ ಟಿ.ಜಿ.ನಾಡಿಗೇರ ಅವರು ಪ್ರಶಂಸಾ ಪತ್ರವನ್ನು ನಿರಂಜನನಿಗೆ ವಿತರಿಸಿದರು. ಶಾಲೆಯ ಮುಖ್ಯ ಶಿಕ್ಷಕಿ ವನಿತಾ ನಾಯಕ, ಶಿಕ್ಷಕ ಮಾರುತಿ ಉಪ್ಪಾರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿರಸಿ:</strong> ಬಹುವಿಧದ ಅಂಗವೈಕಲ್ಯ ಹೊಂದಿದ್ದ ಸ್ನೇಹಿತೆಯನ್ನು ನಿತ್ಯ ಶಾಲೆಗೆ ಕರೆದುಕೊಂಡು ಬಂದು ಕಾಯಕನಿಷ್ಠೆ ತೋರಿದ್ದ ಬಾಲಕನಿಗೆ ಹಿರಿಯ ಅಧಿಕಾರಿಯೊಬ್ಬರು ಬೆನ್ನುತಟ್ಟಿದ್ದಾರೆ.</p>.<p>ತಾಲ್ಲೂಕಿನ ತಿಗಣಿ ಹಿರಿಯ ಪ್ರಾಥಮಿಕ ಶಾಲೆಯ ಆರನೇ ತರಗತಿ ವಿದ್ಯಾರ್ಥಿ ನಿರಂಜನ ಕಬ್ಬೇರ್ ನಿತ್ಯ ಶಾಲೆಗೆ ಬರುವಾಗ, ಬೆನ್ನುಹುರಿ, ಕಾಲಿನ ತೊಂದರೆ ಅನುಭವಿಸುತ್ತಿದ್ದ ಸ್ನೇಹಿತೆ ಪ್ರಾರ್ಥನಾ ಗೌಡಳ ಸ್ಕೂಲ್ ಬ್ಯಾಗ್ ಹೊತ್ತುಕೊಂಡು ಅವಳನ್ನು ನಡೆಸಿಕೊಂಡು ಶಾಲೆಗೆ ಕರೆತರುತ್ತಿದ್ದ. ಆಕೆ ಮೂರನೇ ತರಗತಿಯಲ್ಲಿರುವಾಗಿನಿಂದ ಈ ಕಾಯಕವನ್ನು ನಿತ್ಯವೂ ವ್ರತದಂತೆ ಪಾಲಿಸುತ್ತಿದ್ದ ಆತ, ಒಂದು ವರ್ಷದ ಹಿಂದೆ ಪ್ರಾರ್ಥನಾ ಅಸುನೀಗುವವರೆಗೂ ಇದನ್ನು ಮುಂದುವರಿಸಿದ್ದ.</p>.<p>’ಪ್ರಜಾವಾಣಿ’ ಕಳೆದ ನವೆಂಬರ್ 14, ಮಕ್ಕಳ ದಿನಾಚರಣೆಯಂದು ‘ಬಣ್ಣದ ಚಿಟ್ಟೆ’ ಶೀರ್ಷಿಕೆಯಡಿ, ಪರಿಚಯಿಸಿದ ಸಾಧಕ ಮಕ್ಕಳಲ್ಲಿ ನಿರಂಜನ ಕೂಡ ಒಬ್ಬನಾಗಿದ್ದ. ಈ ವರದಿ ಓದಿದ್ದ ಸಮಗ್ರ ಶಿಕ್ಷಣ ಕರ್ನಾಟಕದ ಕಾರ್ಯಕ್ರಮ ನಿರ್ದೇಶಕ ಕೆ.ರಾಜು ಮೊಗವೀರ ಅವರು, ವಿದ್ಯಾರ್ಥಿಯಲ್ಲಿರುವ ಮಾನವೀಯ ಮೌಲ್ಯವನ್ನು ಗುರುತಿಸಿ, ಆತನಿಗೆ ಪ್ರಶಂಸಾ ಪತ್ರ ಹಾಗೂ ₹ 3000 ಮೊತ್ತದಠೇವಣಿಪತ್ರವನ್ನು ಕಳುಹಿಸಿಕೊಟ್ಟಿದ್ದರು.</p>.<p>ಭಾನುವಾರ ತಿಗಣಿ ಶಾಲೆಯಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಬನವಾಸಿಯ ಹಿರಿಯರಾದ ಟಿ.ಜಿ.ನಾಡಿಗೇರ ಅವರು ಪ್ರಶಂಸಾ ಪತ್ರವನ್ನು ನಿರಂಜನನಿಗೆ ವಿತರಿಸಿದರು. ಶಾಲೆಯ ಮುಖ್ಯ ಶಿಕ್ಷಕಿ ವನಿತಾ ನಾಯಕ, ಶಿಕ್ಷಕ ಮಾರುತಿ ಉಪ್ಪಾರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>