ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕಿರಣಕುಮಾರ, ‘ನೀರಿಗೆ ಬಿಡುವ ಸಾವಿರ ಮರಿಗಳಲ್ಲಿ ಸಾಮಾನ್ಯವಾಗಿ ಒಂದು ಮಾತ್ರ ಜೀವಂತ ಉಳಿದು ದೊಡ್ಡದಾಗಿ ಮುಂದೆ ವಂಶಾಭಿವೃದ್ಧಿ ಮಾಡುತ್ತದೆ. ಉಳಿದವುತಿಮಿಂಗಿಲ, ದೊಡ್ಡ ಮೀನುಗಳು, ಮೀನುಗಾರರ ಬಲೆಗೆ ಸಿಕ್ಕಿ ಸಾವನ್ನಪ್ಪುತ್ತವೆ. ಕಳೆದ ಸೆಪ್ಟಂಬರ್ನಿಂದಈ ವರ್ಷ ಮಾರ್ಚ್ ಅಂತ್ಯದವರೆಗೆ ಧಾರೇಶ್ವರ ಕಡಲ ತೀರದಲ್ಲಿ 2,400 ಕಡಲಾಮೆ ಮೊಟ್ಟೆಗಳನ್ನು ಸಂಗ್ರಹಿಸಿ ಗೂಡಿನಲ್ಲಿ ಸಂರಕ್ಷಿಸಲಾಗಿದೆ. ಅವುಗಳಲ್ಲಿ ಮೊಟ್ಟೆಯೊಡೆದು ಹೊರ ಬಂದ 580 ಮರಿಗಳನ್ನು ಸಮುದ್ರಕ್ಕೆ ಬಿಡಲಾಗಿದೆ’ ಎಂದು ತಿಳಿಸಿದರು.