ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಕೋಲಾ ತಾಲ್ಲೂಕಿನ ಅಡ್ಲೂರು ಬಳಿ ಅಪಘಾತ: ಒಬ್ಬ ಸಾವು

Last Updated 8 ಏಪ್ರಿಲ್ 2019, 14:06 IST
ಅಕ್ಷರ ಗಾತ್ರ

ಅಂಕೋಲಾ:ತಾಲ್ಲೂಕಿನ ಅಡ್ಲೂರು ಬಳಿ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಸೋಮವಾರಟಾಟಾ ಏಸ್ಮತ್ತು ಕಾರಿನನಡುವೆ ನಡೆದ ಅಪಘಾತದಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ಒಂಬತ್ತು ಜನರಿಗೆ ಗಾಯಗಳಾಗಿವೆ.

ಟಾಟಾ ಏಸ್‌ನಲ್ಲಿಪ್ರಯಾಣಿಸುತ್ತಿದ್ದ ಅಗಸೂರು ಗ್ರಾಮದ ವಿಷ್ಣು ನಾರಾಯಣ ನಾಯ್ಕ (65) ಮೃತರು. ಅದೇ ಗ್ರಾಮದವರಾದ ನೇತ್ರಾವತಿ ಬೊಮ್ಮಯ್ಯ ಹರಿಕಂತ್ರ, ಬುಡ್ಡಿ ಲಕ್ಕು ಗೌಡ, ಮಂಗಳಾ ನಾರಾಯಣ ಗೌಡ, ಲಕ್ಷ್ಮೀ ಪರಮೇಶ್ವರ ನಾಯಕ, ಸುಜಾತಾ ಸತೀಶ ನಾಯಕ, ನಾಗಮ್ಮ ವೆಂಕಪ್ಪ ಗೌಡ, ಏಸ್ಚಾಲಕ ಗಿರೀಶ ಶಾಂಬಾ ಬಂಟ ಹಾಗೂ ಕಾರುಚಾಲಕ ಮಹಾಂತೇಶ ವೆಂಕಟೇಶ ಗೌಡ, ವಿವೇಕ ಶಿವಾನಂದ ನಾಯಕ ಗಾಯಗೊಂಡವರು.

ಟಾಟಾ ಏಸ್ ಅಂಕೋಲಾದಿಂದ ಹೊನ್ನಳ್ಳಿಯತ್ತ,ಕಾರುಅಗಸೂರಿನಿಂದ ಅಂಕೋಲಾದತ್ತ ಬರುತ್ತಿದ್ದವು. ಗಾಯಾಳುಗಳನ್ನು ತಾಲ್ಲೂಕು ಆಸ್ಪತ್ರೆಗೆ ಮತ್ತು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಗಿರೀಶ ಶಾಂಬಾ ಬಂಟ ಅವರಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಸಿಪಿಐ ಬಿ.ಪ್ರಮೋದಕುಮಾರಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT