ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರು– ಲಾರಿ ಮುಖಾಮುಖಿ ಡಿಕ್ಕಿ: ಒಬ್ಬ ವ್ಯಕ್ತಿ ಸಾವು

Last Updated 3 ಅಕ್ಟೋಬರ್ 2020, 12:40 IST
ಅಕ್ಷರ ಗಾತ್ರ

ಕುಮಟಾ: ತಾಲ್ಲೂಕಿನ ತಂಡ್ರಕುಳಿ ಕ್ರಾಸ್ ಬಳಿ ಶನಿವಾರ ಕಾರು ಮತ್ತು ಲಾರಿ ಮುಖಾಮುಖಿ ಡಿಕ್ಕಿಯಾಗಿದ್ದು, ಒಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತೊಬ್ಬರಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ.

ಕಾರು ಚಲಾಯಿಸುತ್ತಿದ್ದ, ಉಡುಪಿ ಜಿಲ್ಲೆ ಕುಂದಾಪುರದ ಮಂಜುನಾಥ ಆಚಾರಿ (30) ಮೃತರು. ಅವರೊಂದಿಗೆ ಕಾರಿನಲ್ಲಿದ್ದ ಬೈಂದೂರು ಶಿರೂರಿನ ರವಿಕಾಂತ ಕೃಷ್ಣ ಆಚಾರಿ (32) ಗಂಭೀರವಾಗಗಿ ಗಾಯಗೊಂಡಿದ್ದಾರೆ. ಅವರಿಗೆ ಕುಮಟಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

ಕಾರು ಅಂಕೋಲಾ ಕಡೆಯಿಂದ ಕುಂದಾಪುರದತ್ತ ಹೋಗುತ್ತಿತ್ತು. ಅನಾನಸ್ ಸಾಗಿಸುತ್ತಿದ್ದ ಲಾರಿಯುವ ಕುಮಟಾದಿಂದ ಅಂಕೋಲಾದತ್ತ ಪ್ರಯಾಣಿಸುತ್ತಿತ್ತು. ಸ್ಥಳಕ್ಕೆ ಭೇಟಿ ನೀಡಿದ ಕುಮಟಾ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT