ಕುಮಟಾ: ತಾಲ್ಲೂಕಿನ ತಂಡ್ರಕುಳಿ ಕ್ರಾಸ್ ಬಳಿ ಶನಿವಾರ ಕಾರು ಮತ್ತು ಲಾರಿ ಮುಖಾಮುಖಿ ಡಿಕ್ಕಿಯಾಗಿದ್ದು, ಒಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತೊಬ್ಬರಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ.
ಕಾರು ಚಲಾಯಿಸುತ್ತಿದ್ದ, ಉಡುಪಿ ಜಿಲ್ಲೆ ಕುಂದಾಪುರದ ಮಂಜುನಾಥ ಆಚಾರಿ (30) ಮೃತರು. ಅವರೊಂದಿಗೆ ಕಾರಿನಲ್ಲಿದ್ದ ಬೈಂದೂರು ಶಿರೂರಿನ ರವಿಕಾಂತ ಕೃಷ್ಣ ಆಚಾರಿ (32) ಗಂಭೀರವಾಗಗಿ ಗಾಯಗೊಂಡಿದ್ದಾರೆ. ಅವರಿಗೆ ಕುಮಟಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಕಾರು ಅಂಕೋಲಾ ಕಡೆಯಿಂದ ಕುಂದಾಪುರದತ್ತ ಹೋಗುತ್ತಿತ್ತು. ಅನಾನಸ್ ಸಾಗಿಸುತ್ತಿದ್ದ ಲಾರಿಯುವ ಕುಮಟಾದಿಂದ ಅಂಕೋಲಾದತ್ತ ಪ್ರಯಾಣಿಸುತ್ತಿತ್ತು. ಸ್ಥಳಕ್ಕೆ ಭೇಟಿ ನೀಡಿದ ಕುಮಟಾ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.