‘ಅಕಾಡೆಮಿಗಳಿಗೆ ಸರ್ಕಾರ ಅನುದಾನ ಕಡಿತ ಮಾಡಿದೆ. ಮನೆಯಲ್ಲಿ ಕೃಷಿ ಅಥವಾ ಮತ್ಯಾವುದೋ ಉದ್ಯೋಗ ಇದ್ದವರಾದರೆ ಅಷ್ಟಾಗಿ ಸಮಸ್ಯೆಯಿಲ್ಲ. ಆದರೆ, ಜೀವನೋಪಾಯಕ್ಕಾಗಿ ಕಲೆಯನ್ನೇ ನಂಬಿಕೊಂಡಿರುವವರಿಗೆ ಭಾರಿ ತೊಂದರೆಯಾಗಿದೆ. ಸರ್ಕಾರ ಮುಂದೆ ಯಾವ ರೀತಿ ಸಹಾಯಕ್ಕೆ ನಿಲ್ಲುತ್ತದೆ ಎಂದು ನೋಡಬೇಕು. ಪ್ರಶಸ್ತಿ ಪ್ರಕಟವಾಗಿರುವ ಈ ಖುಷಿಯ ನಡುವೆಯೂ ಆತಂಕಕಾರಿ ಸಂದರ್ಭದ ಬಗ್ಗೆ ಗಂಭೀರವಾಗಿ ಯೋಚಿಸಬೇಕಿದೆ’ ಎಂದರು.