‘ಈ ಬಾರಿ ಹೊಸದಾಗಿ ಅಭ್ಯರ್ಥಿಯ ಲೈವ್ ಕಾರ್ಯಕ್ರಮ, ಉಪಚುನಾವಣೆ ನಡೆಯುವ ಕ್ಷೇತ್ರದ ಗ್ರಾಮೀಣ ಪ್ರದೇಶಗಳಲ್ಲಿ ಜನಾಭಿಪ್ರಾಯ ಸಂಗ್ರಹವನ್ನು ಬಿಜೆಪಿ, ಫೇಸ್ಬುಕ್ನಲ್ಲಿ ಪರಿಚಯಿಸಿದೆ. ಯುವಜನರನ್ನು, ಹೊರ ಊರುಗಳಲ್ಲಿ ಉದ್ಯೋಗದಲ್ಲಿರುವ ಕ್ಷೇತ್ರದ ಮತದಾರರನ್ನು ತಲುಪಲು ಈ ಮಾರ್ಗ ಅನುಕೂಲವಾಗಿದೆ’ ಎನ್ನುತ್ತಾರೆ ಇದರ ನಿರ್ವಹಣೆ ಮಾಡುತ್ತಿರುವ, ಯುವ ಮೋರ್ಚಾ ಯಲ್ಲಾಪುರ ಘಟಕದ ಅಧ್ಯಕ್ಷ ಪ್ರಸಾದ ಹೆಗಡೆ.