14ರ ಬೆಳಿಗ್ಗೆ 6ಕ್ಕೆ ಮಹಾಭಿಷೇಕ, ಸಂಜೆ 5.30ಕ್ಕೆ ರಥಾರೋಹಣ, ರಥಾನಯನ, ರಥಾವರೋಹಣ, ವಸಂತೋತ್ಸವ, ಅಷ್ಟಾವಧಾನ ಪೂಜೆ, ಮಹಾಮಂಗಳಾರತಿ, ತೀರ್ಥಪ್ರಸಾದ ವಿತರಣೆ ನಡೆಯಲಿದೆ. ನಂತರ ಕೊಳಗಿಬೀಸ್ನ ಕುಮಾರ ಭಟ್ಟ ಅವರಿಂದ ಯುಗಪುರುಷ ಶ್ರೀರಾಮನ ಕುರಿತು ಪ್ರವಚನ ನಡೆಯಲಿದೆ ಎಂದರು. ರಾಮಕೃಷ್ಣ ಬಿಳಗಿಕರ್, ಸುರೇಶ ತಾಂಡೇಲ, ಪ್ರಧಾನ ಅರ್ಚಕ ಗುರುಪಾದ ಭಟ್ಟ, ಲಿಂಗಪ್ಪ ಕೊಂಡ್ಲಿ, ಮಂಜುನಾಥ ನಾಯ್ಕ ಇದ್ದರು.