ಶಿರಸಿ: ಟಿಎಸ್ಎಸ್ನಂತಹ ಬಲಾಢ್ಯ ಸಹಕಾರ ಸಂಸ್ಥೆ ಸ್ಥಾಪಿಸಿದ ಶ್ರೀಪಾದ ಹೆಗಡೆ ಕಡವೆ ಸಹಕಾರ ರಂಗದ ಧ್ರುವತಾರೆ ಎಂದು ಮುಂಡಗನಮನೆ ಗ್ರುಪ್ ಗ್ರಾಮಗಳ ಸಹಕಾರ ಸಂಘದ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಹೇಳಿದರು.
ಸಂಘದ ಕಚೇರಿಯಲ್ಲಿ ಶನಿವಾರ ಶ್ರೀಪಾದ ಹೆಗಡೆ ಪುಣ್ಯತಿಥಿ ಅಂಗವಾಗಿ ಹಮ್ಮಿಕೊಂಡ ಸಂಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ರೈತರ ಏಳ್ಗೆಯ ಬಗ್ಗೆ ಅವರು ಹೊಂದಿದ್ದ ದೂರದೃಷ್ಠಿತ್ವ ಇತರರಿಗೆ ಮಾದರಿ. ಅವರಿಗೆ ಸರ್ಕಾರ ಮರಣೋತ್ತರ ‘ಸಹಕಾರ ರತ್ನ’ ಪ್ರಶಸ್ತಿ ನೀಡಬೇಕು’ ಎಂದರು.
ಸಂಘದ ಮಾರುಕಟ್ಟೆ ಸಲಹೆಗಾರ ವಿ.ಆರ್.ಹೆಗಡೆ ಮತ್ತಿಘಟ್ಟ, ಮುಖ್ಯ ಕಾರ್ಯನಿರ್ವಾಹಕ ನಾಗಪತಿ ಭಟ್ಟ ಇದ್ದರು.