2003-04ರ ಮಹಾ ಯೋಜನೆಯಂತೆ ರಸ್ತೆಯನ್ನು 12 ಮೀಟರ್ ವಿಸ್ತರಣೆಯ ಅನುಷ್ಠಾನಕ್ಕೆ ಪುರಸಭ ಮುಂದಾಗಿದೆ. ರಸ್ತೆ ಜಾಗದಲ್ಲಿ ಕಬ್ಬಿಣದ ಕಂಬ ಹಾಗೂ ತಗಡು ಹಾಕಿ ನಿರ್ಮಿಸಿಕೊಂಡಿದ್ದ ತಾತ್ಕಾಲಿಕ ಚಾವಣಿಯನ್ನು ಕೆಲ ವ್ಯಾಪಾರಸ್ಥರು ಪ್ರೇರಣೆಯಿಂದ ತೆರವುಗೊಳಿಸಿದ್ದಾರೆ. ಇನ್ನು ಕೆಲ ಅಂಗಡಿಕಾರರಿಗೆ ತಿಳಿ ಹೇಳಿದಾಗ ನಂತರ ಅವರೂ ತೆರವು ಕಾರ್ಯಕ್ಕೆ ಸಹಕರಿಸಿದ್ದಾರೆ. ಆದರೆ ಇದೇ ರಸ್ತೆಯಲ್ಲಿ ಕಟ್ಟಡದ ಮುಂದೆ ಖಾಲಿ ಜಾಗ ಹೊಂದಿರುವ ವಕೀಲ ವೈ.ವಿ.ಶಾನಭಾಗ, ಮಹಾಲಕ್ಷ್ಮೀ ಜನರಲ್ ಸ್ಟೋರ್ಸ್ ಮಾಲೀಕರು, ಗೋವಿಂದರಾಯ ಶ್ರೀನಿವಾಸ ಶಾನಭಾಗ ಹಾಗೂ ಬಸ್ತಿ ಮಲಿಕ್ ಅವರು ರಸ್ತೆ ಕಾಮಗಾರಿಗೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ ಎಂದು ಪುರಸಭೆ ಅಧಿಕಾರಿಗಳು ತಿಳಿಸಿದರು.