ಕೃಷಿ ಇಲಾಖೆಯು ರೈತರಿಗೆ ಅನುಕೂಲವಾಗುವಂತೆ ಜಿಲ್ಲೆಯ ಎಲ್ಲ ತಾಲ್ಲೂಕುಗಳ ರೈತ ಸಂಪರ್ಕ ಕೇಂದ್ರಗಳಲ್ಲಿ ಭತ್ತ, ಮೆಕ್ಕೆಜೋಳ, ಗೊಬ್ಬರಗಳ ಸಂಗ್ರಹವನ್ನಿಟ್ಟಿದೆ. ಜಿಲ್ಲೆಯಲ್ಲಿ ಸುಮಾರು 8900 ಕ್ವಿಂಟಲ್ನಷ್ಟು ಬಿತ್ತನೆ ಬೀಜದ ಬೇಡಿಕೆಯಿದ್ದು, ಸದ್ಯದಲ್ಲಿ 5050 ಕ್ವಿಂಟಲ್ ಭತ್ತ, 170 ಕ್ವಿಂಟಲ್ ಹೈಬ್ರೀಡ್ ಭತ್ತ, 950 ಕ್ವಿಂಟಲ್ನಷ್ಟು ಮೆಕ್ಕೆಜೋಳದ ಬೀಜಗಳು ಲಭ್ಯ ಇವೆ. ಮುಂಗಾರು ಹಂಗಾಮಿನ ಜೂನ್ನಿಂದ ಸೆಪ್ಟೆಂಬರ್ವರೆಗೆ 21ಸಾವಿರ ಟನ್ ಗೊಬ್ಬರಗಳ ಬೇಡಿಕೆಯಿರುತ್ತದೆ. ಪ್ರಸ್ತುತ 6320 ಮೆಟ್ರಿಕ್ ಟನ್ ಮಾತ್ರ ಸಂಗ್ರಹದಲ್ಲಿದೆ. ಮೇ ತಿಂಗಳ ಮಧ್ಯಭಾಗದಲ್ಲಿ 2600 ಮೆಟ್ರಿಕ್ ಟನ್ನಷ್ಟು ಗೊಬ್ಬರ ಬರಲಿದೆ ಎಂಬುದು ಇಲಾಖೆ ಅಧಿಕಾರಿಗಳು ನೀಡುವ ಮಾಹಿತಿ.