ಉತ್ಸವದ ಬಗ್ಗೆ ಜನಜಾಗೃತಿ ಮೂಡಿಸಲು ಶುಕ್ರವಾರ ನಗರದಲ್ಲಿ ಬೃಹತ್ ಬೈಕ್ ರ್ಯಾಲಿ ನಡೆಯಿತು. ಮಾರಿಕಾಂಬಾ ದೇವಿಗೆ ಪೂಜೆ ಸಲ್ಲಿಸಿದ ನಂತರ ಆರಂಭವಾದ ರ್ಯಾಲಿಯು, ರಾಮನಬೈಲ್, ಕೋಟೆಕೆರೆ, ಕಸ್ತೂರಬಾ ನಗರ, ವಿವೇಕಾನಂದ ನಗರ, ಮರಾಠಿಕೊಪ್ಪ, ಗಣೇಶನಗರದಲ್ಲಿ ಸಂಚರಿಸಿ, ಶಿವಾಜಿ ಚೌಕದಲ್ಲಿ ಸಮಾಪ್ತಿಗೊಂಡಿತು. ರ್ಯಾಲಿಯಲ್ಲಿ 200ರಷ್ಟು ಮಹಿಳೆಯರು, ಸಾವಿರಾರು ಪುರುಷರು ಭಾಗವಹಿಸಿದ್ದರು.