‘ಗುತ್ತಿಗೆದಾರರು ಹೆಚ್ಚುವರಿ ಕಾಮಗಾರಿ ನಡೆಸಿದ ಕಾರಣ, ಟೆಂಡರ್ ಹಣಕ್ಕಿಂತ ಅಧಿಕ ಮೊತ್ತ ಖರ್ಚಾಗಿರುವುದಾಗಿ ಹೇಳಿದ್ದಾರೆ. ಎಪಿಎಂಸಿ, ಟೆಂಡರ್ನಲ್ಲಿ ನಮೂದಿಸಿದಷ್ಟು ಮೊತ್ತವನ್ನು ಈಗಾಗಲೇ ಪಾವತಿಸಿದೆ. ಹೆಚ್ಚುವರಿ ಕಾಮಗಾರಿ ನಡೆಸಿದ ಬಗ್ಗೆ ಎಂಜಿನಿಯರ್ಗಳು ಇನ್ನೂ ವರದಿ ನೀಡಿಲ್ಲ. ವರದಿ ಬಂದ ಮೇಲೆ, ಕಾಮಗಾರಿ ನಡೆಸಿರುವುದು ದೃಢಪಟ್ಟಲ್ಲಿ, ನಿರ್ದೇಶಕರ ಅನುಮೋದನೆ ಪಡೆದು, ಬಿಲ್ ಪಾವತಿ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.