‘ಇಲ್ಲಿನ ಹಳ್ಳದಲ್ಲಿ ನೀರು ಸದಾ ತುಂಬಿ ಹರಿಯುತ್ತಿರುತ್ತದೆ. ಬೆರಳೆಣಿಕೆಯಷ್ಟೇ ಮನೆಗಳಿದ್ದು, ಆರೋಗ್ಯ ಸಮಸ್ಯೆಯಾದರೆ ಚಿಕಿತ್ಸೆಗೆ ಕರೆದುಕೊಂಡು ಹೋಗಲು ಹರಸಾಹಸ ಪಡಬೇಕಿದೆ. ಹಳ್ಳದ ನೀರಿನಿಂದಾಗಿ ಊರಿನೊಳಗೆ ವಾಹನಗಳು ಬರಲು ಸಾಧ್ಯವಾಗುತ್ತಿಲ್ಲ. ದಿನಸಿ, ಆಕಳಿನ ಮೇವು, ಹಿಂಡಿ, ಕೃಷಿ ಪರಿಕರಗಳನ್ನು ಹಳ್ಳದ ಬುಡದಿಂದ ತಲೆಹೊರೆಯಲ್ಲೇ ತೆಗೆದುಕೊಂಡು ಹೋಗಬೇಕಿದೆ. ಹಾಗಾಗಿ ಈಗ ಇರುವ ಕಾಲುಸಂಕದ ಸಮೀಪದಲ್ಲೇ ಮತ್ತೊಂದು ಕಿರುಸೇತುವೆ ನಿರ್ಮಾಣ ಮಾಡಿದರೆ ನಾಲ್ಕು ಚಕ್ರಗಳ ವಾಹನಗಳು ಸಾಗಲು ಸಾಧ್ಯವಾಗುತ್ತದೆ’ ಎಂದು ಗ್ರಾಮಸ್ಥರು ಮನವಿ ಮಾಡಿದರು.