ಈ ಯೋಜನೆಯಡಿಯಲ್ಲಿ ಅಡಿಕೆ, ತೆಂಗು, ಮಾವು, ಗೇರು ಮುಂತಾದ ಬಹುವಾರ್ಷಿಕ ಬೆಳೆಗಳ ತೋಟವನ್ನು ನಿರ್ಮಿಸಿಕೊಳ್ಳಬಹುದು. ಅಪ್ರಧಾನ ಹಣ್ಣುಗಳು ಮತ್ತು ಸಾಂಬಾರು ಬೆಳೆಗಳನ್ನು ತೋಟದಲ್ಲಿ ಹಾಗೂ ಜಮೀನಿನಲ್ಲಿ ಬದುಗಳಲ್ಲಿ ನಾಟಿ ಮಾಡಿಕೊಳ್ಳಲೂ ಸಹ ಸಹಾಯಧನ ಲಭ್ಯವಿದೆ. ಆಸಕ್ತಿಯುಳ್ಳ ರೈತರು ಅಗತ್ಯ ದಾಖಲೆಗಳೊಂದಿಗೆ ತೋಟಗಾರಿಕೆ ಇಲಾಖೆ ಕಚೇರಿಗೆ ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗೆ 9353548931,8310478112, 8317498506,7619274889 ಸಂಖ್ಯೆಗೆ ಸಂಪರ್ಕಿಸಬಹುದು ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ತಿಳಿಸಿದ್ದಾರೆ.