ಜೇನಿನ ಕುಟುಂಬ ಹೆಚ್ಚಾದರೆ, ತೋಟಗಾರಿಕಾ ಬೆಳೆಗಳ ಇಳುವರಿ ಕೂಡ ಹೆಚ್ಚಾಗುತ್ತದೆ. ಜೇನು ಕೃಷಿಗೆ ಸತತ ನಿಗಾವಹಿಸುವುದು ಅವಶ್ಯ. ಇದನ್ನು ಉಪ ಉದ್ಯೋಗವನ್ನಾಗಿ ಮಾಡಿಕೊಂಡರೆ ರೈತರ ಆದಾಯ ವೃದ್ಧಿಸುತ್ತದೆ. ಸರ್ಕಾರದ ವಿವಿಧ ಯೋಜನೆಗಳ ಅಡಿಯಲ್ಲಿ ಜೇನು ಪೆಟ್ಟಿಗೆ ವಿತರಣೆಯಾಗುತ್ತದೆ. ಆದರೆ, ಇದು ಸದ್ಬಳಕೆಯಾಗುತ್ತಿದೆಯೇ ಎಂಬ ಬಗ್ಗೆ ಪರಿಶೀಲನೆ ನಡೆಯುತ್ತಿಲ್ಲ. ಹೀಗಾಗಿ, ಸೌಲಭ್ಯ ನೀಡಿದರೂ, ಈ ಕೃಷಿ ಯಲ್ಲಿ ವಿಶೇಷ ಪ್ರಗತಿ ಕಾಣುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.