<p><strong>ಕಾರವಾರ: ‘</strong>ಮೊಬೈಲ್ ಗೀಳು ಸೃಜನಶೀಲತೆ ಕೊಲ್ಲುತ್ತದೆ. ಪುಸ್ತಕಗಳ ಓದು ಮನಸ್ಸು ವಿಚಲಿತವಾಗದೇ ಸುಸಂಸ್ಕೃತ ಸಮಾಜ ನಿರ್ಮಾಣ ಮಾಡಲು ಅಡಿಪಾಯವಾಗುತ್ತದೆ’ ಎಂದು ಕೈಗಾದ ಅಣು ವಿದ್ಯುತ್ ನಿಗಮದ ಕಾರ್ಯನಿರ್ವಹಣಾ ಅಧೀಕ್ಷಕ ಎಸ್.ಜೆ.ಟಿ.ಸ್ವಾಮಿ ಹೇಳಿದರು.</p>.<p>ತಾಲ್ಲೂಕಿನ ಮಲ್ಲಾಪುರದ ಕೈಗಾ ಟೌನ್ಶಿಪ್ನಲ್ಲಿನ ಸಹ್ಯಾದ್ರಿ ಭವನದಲ್ಲಿ ಸಹ್ಯಾದ್ರಿ ಕನ್ನಡ ಸಂಘದ ಗ್ರಂಥಾಲಯ ವಿಭಾಗವು ಓದುಗರಿಗೆ ಆಯೋಜಿಸುತ್ತಿರುವ ‘ಹೊತ್ತಿಗೆಯ ಹೊತ್ತು’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆಯಿಂದ ಮನುಷ್ಯ ಚಾರಿತ್ರ್ಯಕ್ಕೆ ಧಕ್ಕೆ ತಂದುಕೊಳ್ಳುವ ಅಪಾಯಕ್ಕೆ ಸಿಲುಕಿದ್ದಾನೆ. ಮೊಬೈಲ್ ಬಳಕೆಗೆ ದಿನದ ಬಹುಹೊತ್ತು ಮೀಸಲಿಡುವ ಬದಲು ಉತ್ತಮ ಪುಸ್ತಕಗಳನ್ನು ಓದುವ ಅಭಿರುಚಿ ಬೆಳೆಸಿಕೊಂಡರೆ ಜ್ಞಾನದ ಜೊತೆಗೆ ವ್ಯಕ್ತಿತ್ವ ವಿಕಸನಕ್ಕೆ ನಾಂದಿಯಾಗುತ್ತದೆ’ ಎಂದರು.</p>.<p>ಹಿರಿಯ ತಾಂತ್ರಿಕ ಎಂಜಿನಿಯರ್ ಶ್ರೀಮತಿ ನಾಚಿಮ್ಮಯ್ಯ, ಸಂಘದ ಅಧ್ಯಕ್ಷ ಜೀತೇಂದ್ರ, ಕಾರ್ಯದರ್ಶಿ ರಾಘವೇಂದ್ರ, ಫಣಿರಾಜ್, ಗಜಾನನ ನಾಯ್ಕ, ಗೌಡಪ್ಪನವರ ಶಿವಕುಮಾರ್, ಮೊಹಮ್ಮದ್ ಹರಿಬಿಡಿ, ಕುಬೇರಪ್ಪ ಪೂಜಾರ್, ಕೆ.ಎಸ್.ಮೋಹನ, ಮಹಾಂತೇಶ ಓಶೀಮಠ, ಎಸ್.ಆರ್.ಎನ್.ಮೂರ್ತಿ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾರವಾರ: ‘</strong>ಮೊಬೈಲ್ ಗೀಳು ಸೃಜನಶೀಲತೆ ಕೊಲ್ಲುತ್ತದೆ. ಪುಸ್ತಕಗಳ ಓದು ಮನಸ್ಸು ವಿಚಲಿತವಾಗದೇ ಸುಸಂಸ್ಕೃತ ಸಮಾಜ ನಿರ್ಮಾಣ ಮಾಡಲು ಅಡಿಪಾಯವಾಗುತ್ತದೆ’ ಎಂದು ಕೈಗಾದ ಅಣು ವಿದ್ಯುತ್ ನಿಗಮದ ಕಾರ್ಯನಿರ್ವಹಣಾ ಅಧೀಕ್ಷಕ ಎಸ್.ಜೆ.ಟಿ.ಸ್ವಾಮಿ ಹೇಳಿದರು.</p>.<p>ತಾಲ್ಲೂಕಿನ ಮಲ್ಲಾಪುರದ ಕೈಗಾ ಟೌನ್ಶಿಪ್ನಲ್ಲಿನ ಸಹ್ಯಾದ್ರಿ ಭವನದಲ್ಲಿ ಸಹ್ಯಾದ್ರಿ ಕನ್ನಡ ಸಂಘದ ಗ್ರಂಥಾಲಯ ವಿಭಾಗವು ಓದುಗರಿಗೆ ಆಯೋಜಿಸುತ್ತಿರುವ ‘ಹೊತ್ತಿಗೆಯ ಹೊತ್ತು’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆಯಿಂದ ಮನುಷ್ಯ ಚಾರಿತ್ರ್ಯಕ್ಕೆ ಧಕ್ಕೆ ತಂದುಕೊಳ್ಳುವ ಅಪಾಯಕ್ಕೆ ಸಿಲುಕಿದ್ದಾನೆ. ಮೊಬೈಲ್ ಬಳಕೆಗೆ ದಿನದ ಬಹುಹೊತ್ತು ಮೀಸಲಿಡುವ ಬದಲು ಉತ್ತಮ ಪುಸ್ತಕಗಳನ್ನು ಓದುವ ಅಭಿರುಚಿ ಬೆಳೆಸಿಕೊಂಡರೆ ಜ್ಞಾನದ ಜೊತೆಗೆ ವ್ಯಕ್ತಿತ್ವ ವಿಕಸನಕ್ಕೆ ನಾಂದಿಯಾಗುತ್ತದೆ’ ಎಂದರು.</p>.<p>ಹಿರಿಯ ತಾಂತ್ರಿಕ ಎಂಜಿನಿಯರ್ ಶ್ರೀಮತಿ ನಾಚಿಮ್ಮಯ್ಯ, ಸಂಘದ ಅಧ್ಯಕ್ಷ ಜೀತೇಂದ್ರ, ಕಾರ್ಯದರ್ಶಿ ರಾಘವೇಂದ್ರ, ಫಣಿರಾಜ್, ಗಜಾನನ ನಾಯ್ಕ, ಗೌಡಪ್ಪನವರ ಶಿವಕುಮಾರ್, ಮೊಹಮ್ಮದ್ ಹರಿಬಿಡಿ, ಕುಬೇರಪ್ಪ ಪೂಜಾರ್, ಕೆ.ಎಸ್.ಮೋಹನ, ಮಹಾಂತೇಶ ಓಶೀಮಠ, ಎಸ್.ಆರ್.ಎನ್.ಮೂರ್ತಿ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>