ಬುಧವಾರ, 23 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಾರವಾರ: ‘ಶಕ್ತಿ’ ಯೋಜನೆಗೆ ವಿದ್ಯಾರ್ಥಿಗಳ ಹಿಡಿಶಾಪ

ಬಸ್ ಏರಲಾಗುತ್ತಿಲ್ಲ, ಆಸನವೂ ಸಿಗುತ್ತಿಲ್ಲ: ನೂಕುನುಗ್ಗಲಿನಲ್ಲಿ ಪ್ರಯಾಣದ ಅನಿವಾರ್ಯತೆ
Published : 17 ಜೂನ್ 2024, 4:24 IST
Last Updated : 17 ಜೂನ್ 2024, 4:24 IST
ಫಾಲೋ ಮಾಡಿ
Comments
ಅಂಕೋಲಾದಿಂದ ಬೇಲೆಕೇರಿ ಗ್ರಾಮಕ್ಕೆ ತೆರಳುವ ಬಸ್ ರಶ್ ಆಗಿದ್ದರಿಂದ ವಿದ್ಯಾರ್ಥಿಗಳು ಬಸ್ ಏರಲು ಹರಸಾಹಸಪಡುತ್ತಿರುವುದು
ಅಂಕೋಲಾದಿಂದ ಬೇಲೆಕೇರಿ ಗ್ರಾಮಕ್ಕೆ ತೆರಳುವ ಬಸ್ ರಶ್ ಆಗಿದ್ದರಿಂದ ವಿದ್ಯಾರ್ಥಿಗಳು ಬಸ್ ಏರಲು ಹರಸಾಹಸಪಡುತ್ತಿರುವುದು
ಜೊಯಿಡಾ ತಾಲ್ಲೂಕಿನ ಜಗಲಪೇಟ ಶಾಲೆಗೆ ಸಾಗಲು ಬಸ್ ವ್ಯವಸ್ಥೆ ಇಲ್ಲದ ಕಾರಣ ಕುಡಲಗಾಂವ ಗ್ರಾಮದಿಂದ ಎಂಟು ಕಿ.ಮೀ ದೂರ ಕಾಲ್ನಡಿಗೆಯಲ್ಲೇ ಸಾಗುತ್ತಿರುವ ವಿದ್ಯಾರ್ಥಿಗಳು. ಇಬ್ಬರು ಪುಟ್ಟ ಮಕ್ಕಳನ್ನು ಪಾಲಕರು ಭುಜದ ಮೇಲೆ ಹೊತ್ತು ಕರೆದೊಯ್ಯುತ್ತಿರುವುದು
ಜೊಯಿಡಾ ತಾಲ್ಲೂಕಿನ ಜಗಲಪೇಟ ಶಾಲೆಗೆ ಸಾಗಲು ಬಸ್ ವ್ಯವಸ್ಥೆ ಇಲ್ಲದ ಕಾರಣ ಕುಡಲಗಾಂವ ಗ್ರಾಮದಿಂದ ಎಂಟು ಕಿ.ಮೀ ದೂರ ಕಾಲ್ನಡಿಗೆಯಲ್ಲೇ ಸಾಗುತ್ತಿರುವ ವಿದ್ಯಾರ್ಥಿಗಳು. ಇಬ್ಬರು ಪುಟ್ಟ ಮಕ್ಕಳನ್ನು ಪಾಲಕರು ಭುಜದ ಮೇಲೆ ಹೊತ್ತು ಕರೆದೊಯ್ಯುತ್ತಿರುವುದು
ಶಿರಸಿ ವಿಭಾಗಕ್ಕೆ ಹೆಚ್ಚುವರಿ 45 ಬಸ್ ಒದಗಿಸುವಂತೆ ಪ್ರಸ್ತಾವ ಸಲ್ಲಿಸಲಾಗಿದೆ. ಬಸ್ ಮಂಜೂರಾದ ನಂತರ ಆದ್ಯತೆ ಮೇರೆಗೆ ಬಸ್ ವ್ಯವಸ್ಥೆ ಕಲ್ಪಿಸಲಾಗುವುದು
ಕೆ.ಎಚ್.ಶ್ರೀನಿವಾಸ್ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ
ಕೋವಿಡ್ ಮೊದಲು ಅಳ್ವೇಕೋಡಿಗೆ ನಿತ್ಯ 8 ಬಸ್ಸು ಸಂಚರಿಸುತ್ತಿದ್ದವು. ಈಗ ಅದನ್ನು ಮೂರಕ್ಕೆ ಕಡಿತಗೊಳಿಸಲಾಗಿದೆ
ಭಾಸ್ಕರ ಮೊಗೇರ ಅಳ್ವೇಕೋಡಿ
ಶಕ್ತಿ ಯೋಜನೆಯ ಪರಿಣಾಮದಿಂದ ಬಸ್ಸುಗಳಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಿದ್ದು ದಟ್ಟಣೆಯಿಂದ ಕೂಡಿರುತ್ತಿದೆ. ಇದರಿಂದ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ನಿರಾಯಾಸವಾಗಿ ಪ್ರಯಾಣಿಸಲು ಕಷ್ಟವಾಗಿದೆ
ಮಂಜುನಾಥ ಹೊಳ್ಳ ಪಾಲಕ
ವಿದ್ಯಾರ್ಥಿಗಳಿಗೋಸ್ಕರ ಪ್ರತ್ಯೇಕ ಬಸ್ ಸಂಚರಿಸುವಂತೆ ವ್ಯವಸ್ಥೆ ಆದರೆ ಸೂಕ್ತ
ಸಂದೀಪ ಭೋಸ್ಲೆ ಹಳಿಯಾಳ ಕಾಲೇಜು ವಿದ್ಯಾರ್ಥಿ
ಬಸ್ ಏರಲು ಹರಸಾಹಸ
ಕೋವಿಡ್ ಪೂರ್ವದಲ್ಲಿ ಕಾರವಾರದಿಂದ ಜೊಯಿಡಾ ಮಾರ್ಗವಾಗಿ ಸಂಚರಿಸುತ್ತಿದ್ದ ಹಲವು ಬಸ್‍ಗಳ ಓಡಾಟ ಸ್ಥಗಿತವಾಗಿದೆ. ಅಣಶಿ ನುಜ್ಜಿ ಭಾಗದಿಂದ ಕುಂಬಾರವಾಡ ದಾಂಡೇಲಿ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ಕುಂಡಲ ಸೇರಿ ಹಲವು ಗ್ರಾಮಗಳಿಗೆ ಬಸ್ ಸೌಕರ್ಯ ಇಲ್ಲದ ಪರಿಣಾಮ ಮಕ್ಕಳು ಹತ್ತಾರು ಕಿ.ಮೀ ಕಾಲ್ನಡಿಗೆಯಲ್ಲಿ ಸಾಗುತ್ತಿದ್ದಾರೆ. ಉಳವಿ ಭಾಗದಿಂದ ಸುಮಾರು 100 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕುಂಬಾರವಾಡದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಬರುತ್ತಾರೆ. ಹೀಗೆ ಬರುವವರು ಬೈಲಹೊಂಗಲ ಬಸ್ಸಿಗೆ ಕಷ್ಟಪಟ್ಟು ಹತ್ತಿ ಬರಬೇಕಾಗಿದೆ. ಅನಮೋಡ ತಿನೈಘಾಟ ಭಾಗದ ವಿದ್ಯಾರ್ಥಿಗಳು ಖಾಸಗಿ ವಾಹನಗಳಲ್ಲಿ ಸಂಚರಿಸುವ ಅನಿವಾರ್ಯತೆಯಲ್ಲಿದ್ದಾರೆ. ‘ರಾಮನಗರ ಮಾರ್ಗವಾಗಿ ಗೋವಾಗೆ ಸಂಚರಿಸುವ ಬಸ್ಸುಗಳ ಸಂಖ್ಯೆ ಕಡಿಮೆಯಾಗಿದೆ. ಬಹುತೇಕ ಬಸ್ಸುಗಳನ್ನು ನಿಲ್ಲಿಸುತ್ತಿಲ್ಲ. ಇದರಿಂದ ಮಕ್ಕಳು ಶಿಕ್ಷಣಕ್ಕಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ’ ಎಂದು ತಿನೈಘಾಟ್‍ನ ವಾಸುದೇವ ಸಾವಂತ ದೂರುತ್ತಾರೆ.
ಅನಿಯಮಿತ ಸಂಚಾರದಿಂದ ಸಮಸ್ಯೆ
ಹೊನ್ನಾವರ ತಾಲ್ಲೂಕಿನಲ್ಲಿ ಬಸ್‌ಗಳ ಅನಿಯಮಿತ ಸಂಚಾರ ಜನರ ಸಂಕಷ್ಟಕ್ಕೆ ಕಾರಣವಾಗಿದೆ. ತಾಲ್ಲೂಕಿನಲ್ಲಿ ಬಸ್ ಡಿಪೊ ಇಲ್ಲದಿರುವುದು ಸಮಸ್ಯೆಗಳನ್ನು ದ್ವಿಗುಣವಾಗಿಸಿದೆ. ‘ರಸ್ತೆ ಸರಿ ಇರದ ಕಾರಣ ಮಳೆಗಾಲ ಕಾಲಿಟ್ಟೊಡನೆ ಮಹಿಮೆಗೆ ಬಸ್ ಬರುವುದು ನಿಂತಿದೆ. ಬಸ್ ಹತ್ತಲು ನಿತ್ಯ 12 ಕಿ.ಮೀ ನಡೆದುಕೊಂಡು ಹೋಗಬೇಕಿದೆ’ ಎಂದು ಮಹಿಮೆಯ ರಾಜೇಶ ನಾಯ್ಕ ಅಳಲು ತೋಡಿಕೊಂಡರು. ‘ಕಡತೋಕಾ ಹೆಬ್ಬಾರನಕೇರಿ ಅರೇಅಂಗಡಿ ಮಾರ್ಗದಲ್ಲಿ ಹೆಚ್ಚಿನ ಬಸ್ ಬಿಡುವಂತೆ ಆಗ್ರಹಿಸಿ ಕಳೆದ ವರ್ಷ ಗ್ರಾಮ ಸಭೆಯಲ್ಲಿ ನಿರ್ಣಯ ಕೈಗೊಂಡು ಸಾರಿಗೆ ವ್ಯವಸ್ಥಾಪಕರಿಗೆ ಪತ್ರ ಬರೆದರೂ ಮನವಿಗೆ ಸ್ಪಂದಿಸಿಲ್ಲ’ ಎಂದು ಕಡತೋಕಾ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಾವಿತ್ರಿ ಭಟ್ಟ ದೂರುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT