ಹೊನ್ನಾವರ ತಾಲ್ಲೂಕಿನ ವಿವಿಧೆಡೆಯೂ ಭತ್ತಕ್ಕೆ ಇಂಥದ್ದೇ ಸಮಸ್ಯೆ ಎದುರಾಗಿದೆ. ತಾಲ್ಲೂಕಿನ ಹಳದಿಪುರ, ಕರ್ಕಿ, ಚಂದಾವರ ಸುತ್ತಮತ್ತ ಸಸಿಗಳು ಹಳದಿ ಬಣ್ಣಕ್ಕೆ ತಿರುಗಿವೆ. ಶಿರಸಿ ತಾಲ್ಲೂಕಿನ ಹಲವು ಗ್ರಾಮಗಳಲ್ಲೂ ರೋಗ ಕಂಡುಬಂದಿದೆ. ಹೊಲಗಳಲ್ಲಿ ಈ ವೇಳೆಗಾಗಲೇ ಭತ್ತದ ತೆನೆಗಳು ಮೂಡಿರಬೇಕಿತ್ತು. ಸೊರಗಿದ ಸಸಿಗಳಿಗೆ ರೈತರು ಆರೈಕೆ ಮಾಡುತ್ತಿದ್ದು, ಇನ್ನಷ್ಟೇ ಚೇತರಿಕೆ ಕಾಣಬೇಕಿದೆ.