ಆಡಿ ಬೆಳೆದ ಊರಿನ ರಸ್ತೆಯ ಬದಿಯಲ್ಲಿ ಕಸ ಬಿದ್ದಿರುವುದನ್ನು ಕಂಡ ಈ ಯುವ ಬೆಂಗಳೂರು ವಾಸಿಗಳು, ಗುರುವಾರ ಬೆಳಿಗ್ಗೆ ಎಲ್ಲವನ್ನೂ ಸ್ವಚ್ಛಗೊಳಿಸಿದರು. ‘ಕಸದ ರಾಶಿಗಳನ್ನು ಕಂಡಾಗ ಉಳಿದವರಿಗೂ ಇಲ್ಲಿಯೇ ಎಸೆದು ಬಿಡೋಣ ಎನಿಸುತ್ತದೆ. ನಮ್ಮೂರಿನ ಸ್ವಚ್ಛತೆ ಕಾಯ್ದುಕೊಳ್ಳುವುದು ನಮ್ಮ ಜವಾಬ್ದಾರಿ. ಮತದಾನ ಮಾಡಿದ ಜತೆಗೆ ಸ್ವಚ್ಛತಾ ಕಾರ್ಯ ಮಾಡಿದ ಖುಷಿ ಸಿಕ್ಕಿದೆ’ ಎಂದು ಗೀರ್ವಾಣಿ ಹಾರೂಗಾರ ಪ್ರತಿಕ್ರಿಯಿಸಿದರು. ಗುರುಪ್ರಸಾದ, ಚಿನ್ಮಯ ಹೆಗಡೆ, ನವೀನ ಹೆಗಡೆ, ಯೋಗೇಂದ್ರ ಕಾಮತ್, ಸಂತೋಷ ಹೆಗಡೆ ಜೊತೆಯಾಗಿ ಈ ಕಾರ್ಯ ಮಾಡಿದರು.