`ಮಳೆಯ ತೀವ್ರತೆಗೆ ದೇವಾಲಯದ ಮಹಾದ್ವಾರದ ಮುಖ್ಯಮಂಟಪದ ಎದುರು ಮಣ್ಣು ಕುಸಿದಿದೆ. ಇದೇ ರೀತಿ ಮುಂದುವರಿದರೆ ಮಹಾದ್ವಾರ ಕುಸಿದು ಬೀಳುವ ಅಪಾಯ ಕೂಡ ಇದೆ. ಹಿಂದೆ ಇಲ್ಲಿ ಸ್ಥಳೀಯ ಗ್ರಾಮ ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ, ಅರಣ್ಯ ಇಲಾಖೆ ಹಾಗೂ ಶಾಸಕರ ನಿಧಿಯ ಅನುದಾನದಿಂದ ಕುಸಿತ ತಡೆಯಲು ಕಾಮಗಾರಿ ನಡೆಸಲಾಗಿತ್ತು. ಆದರೆ ಕಾಮಗಾರಿಗಳು ಅವೈಜ್ಞಾನಿಕವಾಗಿದ್ದರಿಂದ ಕುಸಿತದ ತೀವ್ರತೆ ಹೆಚ್ಚಿದೆ.