‘ಸಾಮಾಜಿಕ ಕಳಕಳಿಯುಳ್ಳ ಯತಿಶ್ರೇಷ್ಠರು, ಜ್ಞಾನಿಯಾಗಿದ್ದ ವಿಶ್ವೇಶತೀರ್ಥರ ನಿಧನ ದುಃಖದ ಸಂಗತಿ. ಯಾವುದೇ ಸಾಮಾಜಿಕ ಸಮಸ್ಯೆಯಿದ್ದರೂ, ಮುಂಚೂಣಿಯಲ್ಲಿ ನಿಂತು ಅದನ್ನು ಸೌಹಾರ್ದಯುತವಾಗಿ ಬಹೆಗರಿಸಿದ ಕೀರ್ತಿ ಶ್ರೀಗಳದ್ದು. ರಾಷ್ಟ್ರೀಯತೆ ಮತ್ತು ಭಾರತೀಯ ವಿಚಾರಗಳ ಬಗ್ಗೆ ಸಂಪೂರ್ಣ ನಂಬಿಕೆಯನ್ನಿಟ್ಟು, ಅಯೋಧ್ಯೆಯಲ್ಲಿ ಯೋಜಿತ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಶ್ರೀಗಳ ಅವಿರತ ಶ್ರಮ ಚಿರಸ್ಮರಣೀಯ. ವಿಶ್ವ ಹಿಂದೂ ಪರಿಷತ್ನಲ್ಲಿ ಸಕ್ರಿಯವಾಗಿ ಭಾಗವಹಿಸಿ, ರಾಷ್ಟ್ರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು’ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸಂತಾಪ ಹೇಳಿಕೆಯಲ್ಲಿ ತಿಳಿಸಿದ್ದಾರೆ.