ಅಣುಶಕ್ತಿ ಇಲಾಖೆಯ ಸಾರ್ವಜನಿಕಜಾಗೃತಿವಿಭಾಗದ ಮುಖ್ಯಸ್ಥ ರವಿ ಶಂಕರ್ ಮಾತನಾಡಿ, ‘ಅಣು ವಿದ್ಯುತ್ ಸ್ಥಾವರಗಳ ಬಗ್ಗೆ ಸಾರ್ವಜನಿಕರಲ್ಲಿ ಗೊಂದಲಗಳಿವೆ. ಮಾಧ್ಯಮಗಳಲ್ಲೂ ಅರ್ಧ ಸತ್ಯ ಮಾತ್ರ ಪ್ರಕಟವಾಗುತ್ತಿವೆ. ಸ್ಥಾವರಗಳಿಂದಾಗಿ ಕ್ಯಾನ್ಸರ್ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆಎಂದು ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ಕೈಗಾದಲ್ಲಿರುವ ಸ್ಥಾವರಗಳು ಹೊರಸೂಸುವ ವಿಕಿರಣಗಳ ಪ್ರಮಾಣವು, ನಿಗದಿತ ಮಿತಿಯಿಂದಲೂ ಸಾಕಷ್ಟು ಕಡಿಮೆಯಿದೆ. ಇದು ಬಾಳೆಹಣ್ಣಿನಲ್ಲಿರುವ ಪ್ರಮಾಣಕ್ಕಿಂತಲೂ ಕಡಿಮೆಯಿದೆ. ಆದ್ದರಿಂದ ವದಂತಿಗೆ ಕಿವಿಗೊಡಬಾರದು’ ಎಂದು ಮನವಿ ಮಾಡಿದರು.