ಹಾವೇರಿ ಜಿಲ್ಲೆಯ ಜುಮ್ಮನವರ ನಿವಾಸಿ ಮಾದೇವಮ್ಮ ಶಂಕರನಾಗ ಮೃತರು. ಇವರು ಮುರುಡೇಶ್ವರದ ಸುತ್ತಲು ಭಿಕ್ಷಾಟನೆ ಮಾಡಿಕೊಂಡು ಮುರುಡೇಶ್ವದ ನಾಕಾದಲ್ಲಿರುವ ಬಸ್ ನಿಲ್ದಾಣದಲ್ಲಿ ವಾಸವಾಗಿದ್ದರು. 3-4 ತಿಂಗಳ ಹಿಂದೆ ಅನಾರೋಗ್ಯದಿಂದ ಬಳಲುತ್ತಿದ್ದ ಈಕೆಯನ್ನು ಭಟ್ಕಳ ತಾಲ್ಲೂಕು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದರು.