ರಾಮನವಮಿ ದಿನದಿಂದಲೇ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡಿದ್ದು, ನಿತ್ಯ ಪೂಜೆ ಪುನಸ್ಕಾರಗಳು ನಡೆಯುತ್ತಿವೆ, ಜಾತ್ರೆಯ ಆರನೇ ದಿನ ಪಂಡರಾಪುರದ ಮಾದರಿಯಲ್ಲಿ ಧಾರ್ಮಿಕ ಕಾರ್ಯಗಳು ನಡೆಯುತ್ತವೆ. ಮಧ್ಯಾಹ್ನ ವಿಠ್ಠಲ ರಖುಮಾಯಿ ದೇವರನ್ನು ಪಲ್ಲಕ್ಕಿಯಲ್ಲಿ ಹರಿಪಾಠ ವಿಠ್ಠಲ ಭಜನೆಯೊಂದಿಗೆ ವನವಿಹಾರಕ್ಕೆ ಕೊಂಡೊಯ್ಯುವ ಪದ್ಧತಿ ಇದೆ.