ಕೆನರಾ ವೃತ್ತದಲ್ಲಿ 413 ಉಪವಲಯ ಅರಣ್ಯಾಧಿಕಾರಿಗಳಿದ್ದಾರೆ. ಅದರಲ್ಲಿ ಶೇ 50:50ರ ಅನುಪಾತದಂತೆ, ಅರಣ್ಯ ರಕ್ಷಕರಾಗಿ ಬಡ್ತಿ ಹೊಂದಿದ 207 ಸಿಬ್ಬಂದಿಗೆ ಜ್ಯೇಷ್ಠತಾ ಪಟ್ಟಿಯಲ್ಲಿ ಸ್ಥಾನ ನೀಡಿಲ್ಲ. ಕೂಡಲೇ ಈ ಅನ್ಯಾಯ ಸರಿಪಡಿಸಬೇಕು ಎಂದು ಒತ್ತಾಯಿಸಿದರು. ‘ಈಗಾಗಲೇ ಹೊರಡಿಸಿರುವ ಕರಡಿನಲ್ಲಿ ನ್ಯೂನತೆಗಳಿವೆ. ಅದನ್ನು ವಾಪಸ್ ಪಡೆದು ತಜ್ಞರ ಜೊತೆ ಸಮಾಲೋಚಿಸಿ ಎಲ್ಲರಿಗೂ ನ್ಯಾಯ ಒದಗಿಸಲಾಗುವುದು’ ಎಂದು ಪಾಟೀಲ ಭರವಸೆ ನೀಡಿದರು.